ಉದ್ದಿನಬೇಳೆಯಲ್ಲಿ ಆಗುವ ಪ್ರಯೋಜನಗಳು!

ನಮ್ಮ ದಿನನಿತ್ಯದ ಆಹಾರ ಪದ್ದತಿಯಲ್ಲಿ ಉದ್ದನ್ನು ಬಳಸುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ . ಆದರೆ ಉದ್ದಿನಲ್ಲಿರುವ ಮುಖ್ಯವಾದ ಆರೋಗ್ಯಕಾರಿ ಅಂಶಗಳ ಬಗ್ಗೆ ತಿಳಿದಿದೆಯೇ?. ಉದ್ದಿನ ಈ ಉಪಯೋಗಕಾರಿ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ .

ಹಲವು ಸಂಶೋಧನೆಗಳ ಮೂಲಕ ಗೊತ್ತಾಗಿರುವ ಸಂಗತಿ ಏನೆಂದರೆ ಉದ್ದಿನಲ್ಲಿ ಇರುವ ಬಹು ಮುಖ್ಯವಾದ ಆರೋಗ್ಯಾಕಾರಿ ಅಂಶಗಳು. ಹಾಗು ಆಯುರ್ವೇದದಲ್ಲಿ ಇದನ್ನು ಔಷಧಿಯ ರೂಪದಲ್ಲಿ ಬಹು ಮುಖ್ಯವಾಗಿ ಬಳಸುತ್ತಾರೆ . ಉದ್ದನ್ನು ಆಯುರ್ವೇದ ಭಾಷೆಯಲ್ಲಿ ಮಾಷ ಎಂದು ಕರೆಯುತ್ತಾರೆ . ಉದ್ದಿನಲ್ಲಿ ಇರುವ ಪ್ರಮುಖ ಅಂಶಗಳಾದ ಹೈ ಪ್ರೋಟೀನ್, ಕಾರ್ಬೋಹೈಡ್ರೇಟ್, ಫ್ಯಾಟ್ ಇಂದ ದಿನದಲ್ಲಿ ನಮ್ಮ ದೇಹಕ್ಕೆ ಬೇಕಾದ ಪ್ರಮುಖ ಅಂಶಗಳನ್ನು ಒದಗಿಸಲು ಸಹಾಯಕಾರಿಯಾಗಿವೆ. ಇದಲ್ಲದೆ ಇದರಲ್ಲಿರುವ ಪೋಷಕಾಂಶಗಳಿಂದ ದೇಹದ ಕೆಲ ಭಾಗಗಳ ನೋವಿನ ಸಮಸ್ಯೆಯನ್ನು ಕೂಡ ನಿವಾರಿಸಬಹುದು . ಹಾಗಾದರೆ ಬನ್ನಿ, ಉದ್ದಿನಲ್ಲಿರುವ ಅರೋಗ್ಯಕಾರಿ ಅಂಶಗಳ ಬಗ್ಗೆ ಹೆಚ್ಚು ತಿಳಿಯೋಣ .

ಹಿಂದಿನ ಕಾಲದಲ್ಲಿ ಎಲ್ಲ ಬಲಿ ಅಥವಾ ಹೋಮಗಳ ಸಂದರ್ಭಗಳಲ್ಲಿ ಮಾಂಸಗಳನ್ನು ಬಳಸುವುದು ನಿಮಗೆ ಗೊತ್ತಿದೆ. ಆದರೆ ಸಸ್ಯಾಹಾರಿಗಳು ಮಾಂಸದ ಬದಲಿಗೆ ಉದ್ದನ್ನು ಮಾಂಸದ ರೂಪದಲ್ಲಿ ಉಪಯೋಗಿಸಬಹುದು. ಏಕೆಂದರೆ ಮಾಂಸದಲ್ಲಿರುವ ಎಲ್ಲ ಪೋಷಕಾಂಶ ಉದ್ದಿನಲ್ಲೂ ಸಹ ಸಿಗುವ ಕಾರಣ ಸಸ್ಯಾಹಾರಿ ಪಥ್ಯೆಯನ್ನು ಪಾಲಿಸುವವರು ಉದ್ದನ್ನು ಈ ರೀತಿಯ ಸಂದರ್ಭಗಳಲ್ಲಿ ಬಳಸಬಹುದು . ಹಾಗಾಗಿ ಇದು ಮಾಂಸದ ರೂಪದ ಶಕ್ತಿಯನ್ನು ನೀಡುತ್ತದೆ .

ಹೌದು! . ಕೆಲವು ಸಂಶೋಧನೆಗಳ ಪ್ರಕಾರ ನಮ್ಮ ದೇಹಕ್ಕೆ ದಿನನಿತ್ಯ ಬೇಕಾದ ಅಗತ್ಯ ಪ್ರೊಟೀನ್ , ಕಾರ್ಬೋಹೈಡ್ರೇಟ್ ಸರಿಯಾದ ಅಂಶದಲ್ಲಿ ಸೇರಲು ಸೂಕ್ತವಾದ ತಿಂಡಿ ಎಂದರೆ ಅದು ಇಡ್ಲಿ . ಇಡ್ಲಿ ನಮ್ಮಲ್ಲಿ ತಲ ತಲಾಂತರದಿಂದ ಬಂದ ಒಂದು ಆಹಾರ ಪದ್ಧತಿ. ಸಾಮಾನ್ಯವಾಗಿ ಯಾವುದೇ ಖಾಯಿಲೆ ಅಥವಾ ಸಮಸ್ಯೆಯಿಂದ ಬಳಲುತ್ತಿರುವ ಸಣ್ಣ ವಯಸ್ಸಿನಿಂದ ಹಿಡಿದು ದೊಡ್ಡವರವರೆಗೂ ನೀಡುವ ಮುಖ್ಯ ಆಹಾರ ಎಂದರೆ ಅದು ಇಡ್ಲಿ. ಏಕೆಂದರೆ ಇಡ್ಲಿಯು ಮೃದುವಾಗಿದ್ದು ಅದು ಸುಲಭವಾಗಿ ಜೀರ್ಣವಾಗುತ್ತದೆ .

ಇದನ್ನು ಮಾಡುವ ವಿಧಾನವೆಂದರೆ ಉದ್ದು ಹಾಗು ಅಕ್ಕಿಯನ್ನು 1:2 ಅನುಪಾತದಲ್ಲಿ ಸೇರಿಸಿ ತಯಾರಿಸುತ್ತಾರೆ . ನಮ್ಮಆಯುರ್ವೇಧ ಗ್ರಂಥಗಳಲ್ಲಿ ಕೂಡ ಇದರ ಬಗ್ಗೆ ಇಂಡಲೀಕ ಎಂಬ ಆಹಾರ ಪಧಾರ್ಥವನ್ನು ತಯಾರಿಸುವ ಬಗೆಯನ್ನು ಬರೆದಿರುವುದನ್ನು ನಾವು ನೋಡಬಹುದು . ಇದು ಸಾಮಾನ್ಯವಾಗಿ ತಯಾರಿಸುವ ವಿಧಾನದ ಜೊತೆಗೆ ಕಾಳು ಮೆಣಸು, ಜೀರಿಗೆ, ಮೆಂತ್ಯೆ ಹಾಗು ಇತರ ಸಾಂಬಾರ್ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಅರಿದು ಇಡ್ಲಿ ಮಾಡುವುದರಿಂದ ಉದ್ದಿನಲ್ಲಿ ಇರುವ ಯಾವುದೇ ರೀತಿಯ ತೊಂದರೆ ಅಥವಾ ದೋಷವನ್ನು ನಿವಾರಿಸಲು ಸಾಧ್ಯವಾಗುತ್ತದೆ . ಈ ರೀತಿ ಪದಾರ್ಥಗಳನ್ನು ಬಳಸಿ ಮಾಡುವುದರಿಂದ ಅದರಿಂದ ಉಂಟಾಗುವ ಯಾವುದೇ ದುಷ್ಪರಿಣಾಮವನ್ನು ನಿಯಂತ್ರಿಸಬಹದು .

ದೇಹದ ಅಂಗಾಂಗಗಳ ನೋವುಗಳನ್ನು ನಿವಾರಿಸುತ್ತದೆ:ಹೌದು ! ನಮ್ಮ ದೇಹದ ಯಾವುದೇ ಅಂಗಾಂಗದಲ್ಲಿ ಕಾಣಿಸುವ ನೋವನ್ನು ಉದ್ದು ಕಡಿಮೆ ಮಾಡಬಲ್ಲದು . ಉದ್ದಿಗೆ ಈ ನೋವು ನಿವಾರಣಾ ಶಕ್ತಿ ಇದೆ . ಹಾಗಾದರೆ ಉದ್ದನ್ನು ಹೇಗೆ ನೋವನ್ನು ನಿವಾರಿಸಲು ಬಳಸುವುದು ತಿಳಿಯೋಣ ಬನ್ನಿ. ಉದ್ದನ್ನು ಚೆನ್ನಾಗಿ ಅರಿದು ಬಿಸಿ ಮಾಡಿ ನೋವಿರು ಜಾಗಕ್ಕೆ ಭಟ್ ಕೊಡುವ ಮುಖಾಂತರ ನೋವನ್ನು ಕಡಿಮೆ ಮಾಡಬಹುದು . ನಾವು ಸಾಮಾನ್ಯವಾಗಿ ನೋವಿರುವ ಜಾಗಕ್ಕೆ ಹಾಕುವ ನೋವಿನ ಎಣ್ಣೆ , ಕಾಳು ಮೆಣಸಿನ ಜೊತೆಗೆ ಉದ್ದನ್ನು ಸೇರಿಸುವುದರಿಂದ ಅದು ಇನ್ನಷ್ಟು ಪರಿಣಾಮಕಾರಿಯಾಗಿ ನೋವನ್ನು ನಿವಾರಿಸಲು ಸಹಾಯವಾಗಲಿದೆ ಎನ್ನುತ್ತಾರೆ ಆಯುರ್ವೇದಿಕ್ ತಜ್ಞರು .

ಕೆಲವೊಮ್ಮೆ ದೇಹದ ಕೆಲವು ಬಾಗಗಳಲ್ಲಿ ಬಾವು ಅಥವಾ ಕುರ ಉಂಟಾಗಿ ಬಹಳ ನೋವು ಅನುಭವಿಸುವುದನ್ನು ನೋಡಿರುತ್ತೀರಿ . ಈ ರೀತಿಯ ಸಮಸ್ಯೆಯನ್ನು ಸಹ ಉದ್ದು ನಿವಾರಿಸಬಲ್ಲದು . ಹೌದು ಬಾವು ಅಥವಾ ಕುರ ಆದ ಸಂದರ್ಭಗಳಲ್ಲೂ ಕೂಡ ಉದ್ದನ್ನು ಬಳಸಿ ನೋವನ್ನು ನಿವಾರಿಸಬಹುದು. ಅದು ಹೇಗೆಂದರೆ ಉದ್ದಿನ ಹಿಟ್ಟನ್ನು ಬಿಸಿ ಮಾಡಿ ಅದರ ಶಾಖವನ್ನು ಬಾವು ಆದ ಜಾಗಕ್ಕೆ ಕೊಡುವುದರಿಂದ ಅದು ಬೇಗ ಹಣ್ಣಾಗಿ ಹೊಡೆದುಕೊಳ್ಳಲು ಸಹಾಯವಾಗುತ್ತದೆ ಹಾಗು ನೋವು ನಿವಾರಿಸುತ್ತದೆ.

ನರ ದೌರ್ಬಲ್ಯವನ್ನು ಹೋಗಲಾಡಿಸಿ ನರನಾಡಿಗಳಲ್ಲಿ ಶಕ್ತಿ ತುಂಬುತ್ತದೆ:-ಫೇಶಿಯಲ್ ಪಾಲ್ಸ್( ಅರ್ದಿತ) , ಪಾರ್ಶ್ವವಾಯು , ಸಂಧಿವಾತ ಅಥವಾ ನಾಡಿ ದೌರ್ಭಲ್ಯ ಇತ್ಯಾದಿ ಸಮಸ್ಯೆಗಳ ಸಂದರ್ಭದಲ್ಲೂ ಸಹ ಉದ್ದನ್ನು ಬಳಸಬಹುದು . ಇದರಿಂದ ನರ ನಾಡಿಗೆ ಹೆಚ್ಚು ಶಕ್ತಿಯನ್ನು ಉದ್ದು ನೀಡುತ್ತದೆ ಹಾಗು ನರ ದೌರ್ಬಲ್ಯವನ್ನು ಕಡಿಮೆ ಮಾಡಲು ನೆರವಾಗುತ್ತದೆ .

ಕೆಲ ಸಮಸ್ಯೆಗಳಾದ ಅದ್ರಿತ ಅಥವಾ ಪಕ್ಷಾಗಾಥದ ಸಮಯದಲ್ಲಿ ರೋಗಿಗೆ ಪ್ರತಿನಿತ್ಯ ಬೆಳಿಗ್ಗೆ ಉದ್ದಿನ ಇಡ್ಲಿಯನ್ನು ಸೇವನೆ ಮಾಡಲು ನೀಡುವುದು ಬಹಳ ಒಳ್ಳೆಯದು ಹಾಗು ಇದಕ್ಕೆ ಬೆಣ್ಣೆಯನ್ನು ಸಹ ಸೇರಿಸುವುದರಿಂದ ಇದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ . ಈ ರೀತಿಯ ಪಥ್ಯೆಯನ್ನು ಪಾಲಿಸುವುದರಿಂದ ನರಕ್ಕೆ ಬಹಳ ಶಕ್ತಿ ಹಾಗು ಚೈತನ್ಯವನ್ನು ನೀಡಿ ನರ ದೌರ್ಭಲ್ಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

Leave a Comment