ಬಂಗಾರದ ವಿಷಯದಲ್ಲಿ ಈ ತಪ್ಪು ಮಾಡಬೇಡಿ! ಚಿನ್ನ ಇಡುವ ಜಾಗದಲ್ಲಿ ಇದನ್ನು ಇಡೀ!

ಬಂಗಾರ ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹವಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನ ದೇವಿಗೆ ಹಾಕಿ ಪೂಜೆ ಮಾಡುತ್ತೇವೆ. ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು ವಾಡಿಕೆ. ಅದರಲ್ಲೂ ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ತರುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.

ಆದ್ರೆ ಅಕ್ಷಯ ತೃತೀಯವನ್ನು ಬಿಟ್ಟು ಮತ್ತೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುವಾಗಲೂ ಸಮಯ ನೋಡುವುದು ಅವಶ್ಯಕವಾಗಿದೆ. ನಿಮಗೆ ಬೇಕಾದ ಸಮಯದಲ್ಲಿ ಚಿನ್ನ ಕೊಂಡು ತಂದರೆ ಅದರಿಂದ ಅಭಿವೃದ್ಧಿಯ ಬದಲು ನಷ್ಟವೂ ಸಂಭವಿಸಬಹುದು. ಹಾಗಾಗಿ ಚಿನ್ನ ತರಲು ಕೆಲ ಶುಭ ದಿನ, ಶುಭ ಮುಹೂರ್ತಗಳನ್ನು ನೋಡಲಾಗುತ್ತದೆ.

ರವಿವಾರ, ಶನಿವಾರ ಮತ್ತು ಮಂಗಳವಾರದಂದು ಚಿನ್ನ ಖರೀದಿಸಲು ಹೋಗಬಾರದು. ಅಷ್ಟೇ ಅಲ್ಲದೇ ಈ ದಿನಗಳಲ್ಲಿ ಯಾವುದೇ ಶುಭಕಾರ್ಯ ಮಾಡಬಾರದಂತೆ.

ಚಿನ್ನ ಖರೀದಿಸಲು ಅತ್ಯಂತ ಶ್ರೇಷ್ಠ ದಿನ ಎಂದರೆ ಗುರುವಾರ ಮತ್ತು ಶುಕ್ರವಾರ. ಗುರುವಾರ ಪುಷ್ಯ ನಕ್ಷತ್ರ ದಿನ ಮತ್ತು ಶುಕ್ರವಾರ ಪೂರ್ವ ಫಲ್ಗುಣಿ ನಕ್ಷತ್ರ ಬಂದಾಗ ಚಿನ್ನ ಖರೀದಿಸಿದರೆ ನಿಮ್ಮ ಮನೆಯಲ್ಲಿ ಚಿನ್ನ ಅಕ್ಷಯವಾಗುತ್ತದೆ.

ಇನ್ನು ಸೋಮವಾರ, ಬುಧವಾರದಂದು ಕೂಡ ಚಿನ್ನ ಖರೀದಿಸಬಹುದು. ಆದ್ರೆ ಚಿನ್ನ ಖರೀದಿಸಲು ಎಲ್ಲದಕ್ಕಿಂತ ಶ್ರೇಷ್ಠ ದಿನ ಅಂದ್ರೆ ಗುರುವಾರ ಮತ್ತು ಶುಕ್ರವಾರವಾಗಿದೆ. ಅದರಲ್ಲೂ ಅದಕ್ಕೆ ತಕ್ಕ ನಕ್ಷತ್ರಗಳು ಬಂದರೆ ಇನ್ನೂ ಉತ್ತಮವೆನ್ನಬಹುದು.

Leave a Comment