Astrology

ಚಂದ್ರಕಾಂತ ಮಣಿ ಪ್ರಯೋಜನಗಳು!

ಚಂದ್ರನು ಪ್ರತಿನಿಧಿಸುವ ಈ ಚಂದ್ರಕಾಂತ ಮಣಿಯನ್ನು ಯಾರು ಧರಿಸುತ್ತಾರೋ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ ಈ ಹರಳು. ಸಾಮಾನ್ಯವಾಗಿ ಚಂದ್ರನು ಭಯ, ಚಡಪಡಿಕೆ ಮತ್ತು ಕಿರಿಕಿರಿಯನ್ನುಂಟು ಮಾಡುವ ಮನೋಸ್ಥಿತಿಯನ್ನು ಹೊಂದಿದ್ದಾನೆ. ಹಾಗಾಗಿ ಶಾಂತತೆ ಹಾಗೂ ಭಾವನಾತ್ಮಕ ಸಮತೋಲನ ಸಾಧಿಸಲು ಮತ್ತು ಚಂದ್ರನ ಫಲವನ್ನು ಪಡೆಯಲು ಈ ಹರಳು ಧರಿಸಬೇಕು. ಈ ಹರಳಿನ ಇನ್ನಿತರ ಪ್ರಯೋಜನಗಳೇನು? ಹಾಗೂ ಧಾರಣೆ ಮಾಡುವುದು ಹೇಗೆ ಎನ್ನುವುದರ ಕುರಿತಾದ ಮಾಹಿತಿ ಈ ಲೇಖನದಲ್ಲಿದೆ.

ಹಿಂದೂ ಜ್ಯೋತಿಷ್ಯಶಾಸ್ತ್ರದಲ್ಲಿ ಹರಳು, ರತ್ನಗಳಿಗೆ ವಿಶೇಷವಾದ ಮಹತ್ವವಿದೆ. ಅದರಲ್ಲೂ ಚಂದ್ರಕಾಂತ ಮಣಿ ಎಂದು ಕರೆಯಲ್ಪಡುವ ಉಪ ರತ್ನವು ವಿಶೇಷವಾದ ಗುಣಗಳನ್ನು ಹೊಂದಿದೆ. ‘ಮೂನ್‌ ಸ್ಟೋನ್‌’ ಹೆಸರೇ ಹೇಳುವಂತೆ ಚಂದ್ರನಂತಿರುವ ಕ್ಷೀರ ಬಿಳಿ ಕಲ್ಲು ಇದಾಗಿದ್ದು ಅಪಾರದರ್ಶಕವಾಗಿರುತ್ತದೆ. ನಂಬಿಕೆಗಳ ಪ್ರಕಾರ ಇದು ಸ್ವತಃ ಚಂದ್ರನ ಬೆಳದಿಂಗಳಿನಿಂದ ರೂಪುಗೊಳ್ಳುತ್ತವೆಯೆಂದು ಹೇಳಲಾಗುತ್ತದೆ.

ಚಂದ್ರನು ಪ್ರತಿನಿಧಿಸುವ ಈ ಚಂದ್ರಕಾಂತ ಮಣಿಯನ್ನು ಯಾರು ಧರಿಸುತ್ತಾರೋ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ ಈ ಹರಳು. ಸಾಮಾನ್ಯವಾಗಿ ಚಂದ್ರನು ಭಯ, ಚಡಪಡಿಕೆ ಮತ್ತು ಕಿರಿಕಿರಿಯನ್ನುಂಟು ಮಾಡುವ ಮನೋಸ್ಥಿತಿಯನ್ನು ಹೊಂದಿದ್ದಾನೆ. ಹಾಗಾಗಿ ಶಾಂತತೆ ಹಾಗೂ ಭಾವನಾತ್ಮಕ ಸಮತೋಲನ ಸಾಧಿಸಲು ಮತ್ತು ಚಂದ್ರನ ಫಲವನ್ನು ಪಡೆಯಲು ಈ ಹರಳು ಧರಿಸಬೇಕು ಎಂದು ಹೇಳಲಾಗುತ್ತದೆ. ಈ ವಿಶೇಷ ಕಲ್ಲಿನ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗಿದೆ ಓದಿ.

ಚಂದ್ರಕಾಂತ ಮಣಿಯ ಉಪಯೋಗ

ಈ ಹರಳನ್ನು ‘ಟ್ರಾವೆಲರ್ಸ್‌ ಸ್ಟೋನ್‌’ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇದು ಪ್ರಯಾಣದ ಸಂದರ್ಭದಲ್ಲಿ ಅಪಾಯಗಳಿಂದ ರಕ್ಷಣೆ ನೀಡುತ್ತದೆ ಹಾಗೂ ನಷ್ಟಗಳನ್ನೂ ತಡೆಯುವುದು. ಇದನ್ನು ಧರಿಸಿದವರನ್ನು ಅಪಘಾತಗಳಿಂದ ಈ ಹರಳು ರಕ್ಷಣೆ ನೀಡುವುದೆಂಬ ನಂಬಿಕೆ ಇದೆ. ಪ್ರಯಾಣದ ಸಂದರ್ಭದಲ್ಲಿ ಸುರಕ್ಷತೆಯನ್ನು ನೀಡುವ ಇದು ಧರಿಸಿದವನಿಗೆ ಅದೃಷ್ಟವನ್ನೂ ತರುವುದು. ವೃತ್ತಿಜೀವನದಲ್ಲಿ ಯಾವುದೇ ದೊಡ್ಡ ಮಟ್ಟದ ನಷ್ಟವುಂಟಾಗದೇ ಲಾಭವನ್ನು ಈ ಹರಳು ಧರಿಸಿದವರು ಪಡೆಯುತ್ತಾರೆ.

ವೈದ್ಯಕೀಯ ವೃತ್ತಿಯಲ್ಲಿರುವವರು ಕೂಡಾ ಚಂದ್ರಕಾಂತ ಮಣಿಯನ್ನು ಧರಿಸಬಹುದು. ಏಕೆಂದರೆ ಇದು ಪರರ ಮೇಲಿರುವ ಅನುಭೂತಿಯನ್ನು ಹೊರಗೆ ಬರುವಂತೆ ಮಾಡುತ್ತದೆ. ರೋಗಿಗಳ ಬಗ್ಗೆ ಕಾಳಜಿ ವಹಿಸುವಂತೆ ಮಾಡುತ್ತದೆ. ಈ ಹರಳಿನ ಕಲ್ಲನ್ನು ಪ್ರೇಮಿಗಳ ಕಲ್ಲು ಎಂದೂ ಕರೆಯುತ್ತಾರೆ, ಇದು ಸಹಜ ಪ್ರೀತಿ, ಮೃದುತ್ವ, ತಾಳ್ಮೆಯು ಹೊರಸೂಸುವಂತೆ ಮಾಡುವುದು. ತನ್ನ ವಿಶಿಷ್ಟ ಆಧ್ಯಾತ್ಮಿಕ ಗುಣದ ಮೂಲಕ ಧ್ಯಾನಕ್ಕೆ ಪ್ರೇರೇಪಣೆ ನೀಡುವುದು.

ಆರೋಗ್ಯದಲ್ಲಿ ಚಂದ್ರಕಾಂತ ಮಣಿಯ ಪ್ರಯೋಜನಗಳು

ಮಹಿಳೆಯರು ತಮ್ಮ ಮುಟ್ಟಿನ ಸಮಸ್ಯೆಗಳನ್ನು, ಪಿಎಂಎಸ್‌ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ಹಾರ್ಮೋನುಗಳನ್ನು ಸಮತೋಲಗೊಳಿಸಲು ಚಂದ್ರಕಾಂತ ಮಣಿಯನ್ನು ಧರಿಸಬಹುದು. ಇದು ಅನಗತ್ಯ ಕೋಪ ಮತ್ತು ಆಕ್ರಮಣಶೀಲ ಮನೋಭಾವವನ್ನು ಕಡಿಮೆ ಮಾಡುವುದು. ಹೊಟ್ಟೆ, ಪಿತ್ತಜನಕಾಂಗ ಮತ್ತು ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಖಾಯಿಲೆಗೆ ಚಿಕಿತ್ಸೆ ನೀಡಲು ಈ ಕಲ್ಲನ್ನು ಬಳಸುತ್ತಾರೆ. ಇದು ಜೀರ್ಣಾಂಗವ್ಯೂಹವನ್ನು ನಿಯಂತ್ರಿಸುವುದರಿಂದ ಅಜೀರ್ಣದ ಸಮಸ್ಯೆಯನ್ನೂ ನಿವಾರಿಸುವುದು.

ಮೂಗಿನಲ್ಲಿ ರಕ್ತಸ್ರಾವ ಮತ್ತು ಬೆನ್ನುಹುರಿಯ ಜೋಡಣೆಯಲ್ಲೂ ಈ ಕಲ್ಲನ್ನು ವೈದ್ಯಕೀಯ ಶಾಸ್ತ್ರದಲ್ಲಿ ಬಳಸಲಾಗುವುದು. ನಿದ್ರಾಹೀನತೆ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವವರು ಈ ಹರಳನ್ನು ಧರಿಸಬಹುದು. ಈ ಹರಳನ್ನು ದಿಂಬಿನ ಕೆಳಗೆ ಇಡುವುದರಿಂದ ವ್ಯಕ್ತಿಯ ನಿದ್ರೆಯ ಚಕ್ರವನ್ನು ನಿಯಂತ್ರಿಸಬಹುದು. ಇದನ್ನು ಧರಿಸುವವರ ಮಾನಸಿಕ ಸಾಮರ್ಥ್ಯ, ಸ್ವಯಂ ಅಭಿವ್ಯಕ್ತಿ ಮತ್ತು ಅಂತಃಪ್ರಜ್ಞೆಯನ್ನು ಹೆಚ್ಚಿಸುವುದು. ಇದು ಪೀನಲ್‌ ಗ್ರಂಥಿ ಹಾಗೂ ಮಧ್ಯಮ ಚಕ್ರವನ್ನೂ ಉತ್ತೇಜನಗೊಳಿಸುವುದು.

ಮಾನಸಿಕ ಪ್ರಯೋಜನಗಳು
ಚಂದ್ರಕಾಂತ ಮಣಿಯನ್ನು ಧರಿಸಿದವರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ಇದು ಸೃಜನಶೀಲತೆ ಮತ್ತು ಅಂತಃಪ್ರಜ್ಞೆಯನ್ನು ಸುಧಾರಿಸುವುದರೊಂದಿಗೆ, ಆಂತರಿಕ ಪ್ರೇರಣೆಯನ್ನೂ ನೀಡುವುದು. ಇದನ್ನು ಧರಿಸುವುದರಿಂದ ಒತ್ತಡವು ಕಡಿಮೆಯಾಗಿ ವ್ಯಕ್ತಿಯನ್ನು ಶಾಂತಗೊಳಿಸುತ್ತದೆ. ಪರಿಣಾಮವಾಗಿ ಇದು ನಕಾರಾತ್ಮ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹರಳನ್ನು ಕಣ್ಣುಗಳನ್ನು ಮೇಲೆ ಇರಿಸಿದಾಗ ಉಂಟಾಗುವ ತಂಪಾದ ಕಂಪನಗಳನ್ನು ಅನುಭವಿಸಬಹುದು.

ಚಂದ್ರಕಾಂತ ಮಣಿಯ ಧಾರಣಾ ವಿಧಾನ

ಯಾವಾಗಲೂ ಹರಳುಗಳನ್ನು ಧರಿಸುವಾಗ ಜ್ಯೋತಿಷ್ಯರ ಸಲಹೆ ಪಡೆದ ನಂತರವೇ ಮುಂದುವರಿಯಿರಿ. ನೀವು ಧರಿಸಬಹುದು ಎಂದಾದಲ್ಲಿ ನೀವು ಚಂದ್ರದೇವನ ಮಂತ್ರಗಳನ್ನು ಜಪಿಸಬೇಕು, ಈ ಹರಳನ್ನು ಬೆಳ್ಳಿಯ ಉಂಗುರದಲ್ಲಿ ಹುದುಗಿಸಬೇಕು. ನಂತರ ಶುದ್ಧ ಹಸುವಿನ ಬಿಸಿ ಮಾಡಿದ ಹಾಲಿನಲ್ಲಿ ಹಾಕಿ ಸುಮಾರು ಎಂಟು ಗಂಟೆಗಳ ಹಾಲ ಇರಿಸಿ. ನಂತರ ಚಂದ್ರದೇವನನ್ನು ಪ್ರಾರ್ಥಿಸಿ, ಆಶೀರ್ವಾದವನ್ನು ಪಡೆದು ನಂತರ. ಅಗರಬತ್ತಿಯಿಂದ ಅದರ ಸುತ್ತಲೂ ಹನ್ನೊಂದು ಬಾರಿ ಸುತ್ತಿದ ನಂತರ ಉಂಗುರವನ್ನು ಧರಿಸಬೇಕು.

ಈ ಉಂಗುರವನ್ನು ಸೋಮವಾರದಂದು ಕಿರುಬೆರಳಿನಲ್ಲಿ ಧರಿಸಬೇಕು. ಶುಕ್ಲ ಪಕ್ಷದ ಸೋಮವಾರವಾಗಿದ್ದರೆ ಇನ್ನೂ ಉತ್ತಮ. ಮುಂಜಾನೆ 4ರಿಂದ ಬೆಳಗ್ಗೆ 7ಗಂಟೆಯ ಒಳಗೆ ಧರಿಸಬೇಕು. ಈ ಚಂದ್ರಕಾಂತ ಮಣಿ ಉಂಗುರವನ್ನು ಧರಿಸಲು ಪ್ರಾರಂಭಿಸಿದ ಐದನೇ ದಿನದಿಂದಲೃ ಇದರ ಪರಿಣಾಮಗಳನ್ನು ಅನುಭವಿಸಬಹುದು. ಇದರ ಪರಿಣಾಮ ಎರಡು ವರ್ಷಗಳವರೆಗೆ ಇರುತ್ತದೆ ನಂತರ ಈ ಉಂಗುರದ ಹರಳನ್ನು ಬದಲಾಯಿಸಬೇಕು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago