Health

ರಾಗಿ ಮುದ್ದೆ ಸಕ್ಕರೆ ಕಾಯಿಲೆ ಇದ್ದವರು ತಿಂತಿರಾ ಹಾಗಾದ್ರೆ ಈ ಮಾಹಿತಿ ನೋಡಿ!

ರಾಗಿಮುದ್ದೆಯ ಪ್ರಭಾವ ನಿಜವಾಗಲೂ ತಿಳಿಯಬೇಕೆಂದರೆ ಮನೆಯಲ್ಲಿ ಹಿರಿಯರು ಇರಬೇಕು. ಅವರ ಅನುಭವದ ಮಾತುಗಳು ನಮಗೆ ಸದಾ ಮಾರ್ಗದರ್ಶಿ. ಆರೋಗ್ಯದ ವಿಚಾರದಲ್ಲಿ ಕೂಡ ಅವರನ್ನು ಮೀರಿಸುವವರು ಯಾರೂ ಇಲ್ಲ.

ನಮ್ಮ ಇಂದಿನ ಕೆಟ್ಟ ಜೀವನ ಶೈಲಿಯಲ್ಲಿ ನಾವು ಕೇವಲ ಅನಾರೋಗ್ಯಕರ ಆಹಾರಗಳನ್ನು ಸೇವನೆ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಪ್ರತಿಬಾರಿ ಇದೇ ರೀತಿ ನಡೆಯುತ್ತಾ ಹೋದರೆ ನಮ್ಮ ಆಯಸ್ಸು ಅರ್ಧಕ್ಕೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.

ದಕ್ಷಿಣ ಭಾರತದ ಪ್ರಮುಖ ಆಹಾರ ಎಂದರೆ ಅದು ರಾಗಿ. ರಾಗಿ ಕೇವಲ ಹಳ್ಳಿಗಾಡಿನ ಪ್ರದೇಶಕ್ಕೆ ಮಾತ್ರ ಸೀಮಿತ ಎಂಬುದು ತಪ್ಪು. ನಗರ ಪ್ರದೇಶದಲ್ಲಿ ವಾಸ ಮಾಡುವವರು ಮುಖ್ಯವಾಗಿ ರಾಗಿ ಮತ್ತು ರಾಗಿಯ ಉತ್ಪನ್ನಗಳನ್ನು ಸೇವನೆ ಮಾಡುವುದು ಒಳ್ಳೆಯದು.

ರಾಗಿಮುದ್ದೆ ಇದರಲ್ಲೊಂದು. ರಾಗಿಮುದ್ದೆ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ರಾಗಿಮುದ್ದೆ ಪ್ರತಿದಿನ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ತಿನ್ನುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು

​ದೇಹದ ತೂಕ ಕಡಿಮೆಯಾಗುತ್ತದೆ

ನಿಮ್ಮ ಸೊಂಟದ ಭಾಗದಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ಬೊಜ್ಜು ಮತ್ತು ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ರಾಗಿಮುದ್ದೆ ಸೇವನೆಯಿಂದ ಕಡಿಮೆಯಾಗುತ್ತದೆ. ಇದರಲ್ಲಿ ಅಮೈನೊ ಆಮ್ಲ ಹೆಚ್ಚಾಗಿರುವುದರಿಂದ ಹೊಟ್ಟೆ ಹಸಿವು ನಿವಾರಣೆಯಾಗುತ್ತದೆ.

ಪ್ರೋಟೀನ್ ಅಂಶ ಮತ್ತು ಆರೋಗ್ಯಕರವಾದ ಕಾರ್ಬೋಹೈಡ್ರೇಟ್ ಅಂಶಗಳು ಹೆಚ್ಚಾಗಿ ಕಂಡುಬರುತ್ತದೆ. ನಾರಿನ ಅಂಶ ಕೂಡ ಇರುವುದರಿಂದ ಹೊಟ್ಟೆ ಹಸಿವಿನ ನಿವಾರಣೆ ಆಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದೊಂದು ಅತ್ಯುತ್ತಮವಾದ ಆಹಾರ ಪದಾರ್ಥ ಎಂದು ಹೇಳಬಹುದು.

​ಮೂಳೆಗಳಿಗೆ ತುಂಬಾ ಸಹಕಾರಿ

ರಾಗಿ ಮುದ್ದೆಯಲ್ಲಿ ನಿಮ್ಮ ಮೂಳೆಗಳನ್ನು ಬಲಪಡಿಸುವ ಗುಣವಿದೆ. ಏಕೆಂದರೆ ಇದರಲ್ಲಿ ಅಪಾರ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಂಶ ಸಿಗುತ್ತದೆ.

ವಯಸ್ಸಾದ ನಂತರದಲ್ಲಿ ಪ್ರತಿದಿನ ರಾಗಿಮುದ್ದೆ ನಿಯಮಿತವಾಗಿ ಸೇವನೆ ಮಾಡುವುದರಿಂದ ಆಸ್ಟಿಯೋಪೋರೋಸಿಸ್ ಸಮಸ್ಯೆ ನಿವಾರಣೆಯಾಗುತ್ತದೆ. ವಿಟಮಿನ್ ಅಂಶಗಳು ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿರುವ ಕಾರಣ ಮೆಟಬಾಲಿಸಂ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ.

ಅತ್ಯುತ್ತಮವಾದ ಆರೋಗ್ಯಕ್ಕಾಗಿ ದೇಹದಲ್ಲಿ ಬೆಳವಣಿಗೆಗೆ ಸಂಬಂಧಪಟ್ಟ ಹಾರ್ಮೋನುಗಳ ಅಭಿವೃದ್ಧಿ ನಡೆಯುತ್ತದೆ. ನಾರಿನಂಶ ಅಧಿಕವಾಗಿರುವುದರಿಂದ ಉತ್ತಮವಾದ ಜೀರ್ಣ ಪ್ರಕ್ರಿಯೆ ನಿಮ್ಮದಾಗುತ್ತದೆ. ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ ಜೊತೆಗೆ ಮೆಟಬಾಲಿಸಂ ಪ್ರಕ್ರಿಯೆ ಅತ್ಯುತ್ತಮವಾಗಿ ನಡೆಯುತ್ತದೆ.

​ಮಧುಮೇಹ ನಿವಾರಣೆ ಸಾಧ್ಯ

ಇತ್ತೀಚಿಗೆ ಬಹಳಷ್ಟು ಜನರು ತಮ್ಮ ಚಿಕ್ಕ ವಯಸ್ಸಿನಲ್ಲಿ ಮಧುಮೇಹ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ರಾಗಿಮುದ್ದೆ ಸೇವನೆ ಮಾಡುವುದರಿಂದ ಜಠರ ನಾಳದ ಸಂಬಂಧಿತ ಆರೋಗ್ಯದ ಅಸ್ವಸ್ಥತೆಗಳು ದೂರವಾಗುತ್ತವೆ.

ಇದಕ್ಕೆ ಬಹುಮುಖ್ಯ ಕಾರಣ ಎಂದರೆ ನಾರಿನ ಅಂಶ ಮತ್ತು ಪಾಲಿಫಿನಾಲ್ ಅಂಶ. ನಾರಿನ ಅಂಶ ಹೆಚ್ಚಾಗಿದ್ದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಚ್ಚುಕಟ್ಟಾಗಿ ನಿರ್ವಹಣೆ ಆಗುತ್ತದೆ ಇದರ ಜೊತೆಗೆ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮಗೊಳ್ಳಲಿದೆ.

ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ಅತಿಯಾಗಿ ತಿನ್ನಬೇಕು ಎನ್ನುವ ಹಂಬಲ ಕಡಿಮೆಯಾಗುತ್ತದೆ. ಇದರಿಂದ ತೂಕ ನಿರ್ವಹಣೆ ಅಚ್ಚುಕಟ್ಟಾಗಿ ಆಗುತ್ತದೆ.

​ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ

ಮೊದಲೇ ಹೇಳಿದಂತೆ ರಾಗಿ ಮುದ್ದೆಯಲ್ಲಿ ಅಮೈನೋ ಆಮ್ಲಗಳು ಹೆಚ್ಚಾಗಿದೆ. ಇದರಿಂದ ಕೊಲೆಸ್ಟ್ರಾಲ್ ಪ್ರಮಾಣದ ಮಟ್ಟ ಕುಸಿಯುತ್ತದೆ. ಲಿವರ್ ಭಾಗದಿಂದ ಬೇಡದ ಕೊಬ್ಬಿನ ಅಂಶ ದೂರವಾಗುತ್ತದೆ.

ಹೃದಯ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಅಂಶ ಶೇಖರಣೆ ಆಗುವುದು ತಪ್ಪಿ ರಕ್ತ ಸಂಚಾರ ಹೆಚ್ಚಾಗುತ್ತದೆ. ಇದರಿಂದ ಸಾಧಾರಣವಾಗಿ ನಿಮ್ಮ ಅಧಿಕ ರಕ್ತದ ಒತ್ತಡ ಕಡಿಮೆಯಾಗಿ ಹೃದಯಕ್ಕೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ.

​ಅನಿಮಿಯಾ ಸಮಸ್ಯೆ

ನೀವು ಸಣ್ಣಪುಟ್ಟ ಕೆಲಸ ಮಾಡಿದ ಸಂದರ್ಭದಲ್ಲಿ ನಿಮಗೆ ಹೆಚ್ಚು ದೇಹಕ್ಕೆ ಆಯಾಸ ಎದುರಾದರೆ ನಿಮ್ಮ ದೇಹದಲ್ಲಿ ಶಕ್ತಿಯ ಪ್ರಮಾಣ ಕಡಿಮೆ ಇದೆ ಎಂದು ಅರ್ಥ. ಇದಕ್ಕೆ ಮುಖ್ಯ ಕಾರಣ ಎಂದರೆ ಕಬ್ಬಿಣದ ಅಂಶದ ಕೊರತೆ.

ಆರೋಗ್ಯಕರವಾಗಿ ನೀವು ಇರಬೇಕು ಎಂದರೆ ನಿಮ್ಮ ದೇಹದಲ್ಲಿ ಯಾವುದೇ ಕಾರಣಕ್ಕೂ ಹಿಮೋಗ್ಲೋಬಿನ್ ಕೊರತೆ ಎದುರಾಗಬಾರದು.

ಹಿಮೋಗ್ಲೋಬಿನ್ ಮಟ್ಟ ಕುಸಿಯುತ್ತಾ ಹೋದಂತೆ ದೇಹದಲ್ಲಿ ಅನಿಮಿಯಾ ಸಮಸ್ಯೆ ಜೊತೆಗೆ ದೈಹಿಕ ದುರ್ಬಲತೆ ಕೂಡ ಕಾಡುತ್ತದೆ. ನಿಯಮಿತವಾಗಿ ಪ್ರತಿದಿನ ರಾಗಿಮುದ್ದೆ ಸೇವನೆ ಮಾಡುವುದರಿಂದ ರಕ್ತನಾಳಗಳ ಆರೋಗ್ಯ ಸುಧಾರಿಸುತ್ತದೆ.

​ದೇಹಕ್ಕೆ ಅಗತ್ಯ ವಿಶ್ರಾಂತಿ ಸಿಗುತ್ತದೆ

ಮನುಷ್ಯನಿಗೆ ಹೆಚ್ಚು ಕೆಲಸ ಮಾಡಿದ ಸಂದರ್ಭದಲ್ಲಿ ದೇಹಕ್ಕೆ ಆಯಾಸ ಕಂಡುಬಂದ ಸಮಯದಲ್ಲಿ ವಿಶ್ರಾಂತಿ ಅಗತ್ಯವಾಗಿ ಬೇಕಾಗಿರುತ್ತದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಾಗಲು ರಾಗಿಮುದ್ದೆಯ ಸೇವನೆ ಅತ್ಯವಶ್ಯಕ.

ರಾಗಿ ಮುದ್ದೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಕಂಡು ಬರುವುದರಿಂದ, ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಮತ್ತು ಮಾನಸಿಕವಾಗಿ ಒಳ್ಳೆಯ ಆಲೋಚನೆಗಳು ಬರಲು ಪ್ರಾರಂಭವಾಗುತ್ತದೆ. ಇದರಿಂದ ಒಳ್ಳೆಯ ವಿಶ್ರಾಂತಿ ದೇಹಕ್ಕೆ ಸಿಗುತ್ತದೆ.

​ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ

ಈಗಾಗಲೇ ಚಳಿಗಾಲ ಕಳೆದು ಇನ್ನೇನು ಬೇಸಿಗೆಕಾಲ ಪ್ರಾರಂಭವಾಗುವ ಸಮಯ. ಬೇಸಿಗೆಗಾಲದಲ್ಲಿ ಸಾಮಾನ್ಯವಾಗಿ ನಮ್ಮ ದೇಹದ ತಾಪಮಾನ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ನಮ್ಮ ದೇಹವನ್ನು ತಂಪು ಮಾಡಿಕೊಳ್ಳಲು ನಾವು ರಸ್ತೆಬದಿಯಲ್ಲಿ ಪಾನೀಯಗಳನ್ನು ಕುಡಿಯಲು ಮುಂದಾಗುತ್ತೇವೆ.

ಆದರೆ ಇವುಗಳು ನಮ್ಮ ಆರೋಗ್ಯಕ್ಕೆ ಹೆಚ್ಚು ಅನಾರೋಗ್ಯಕರ. ಆದರೆ ಮನೆಯಲ್ಲಿ ಪ್ರತಿದಿನ ರಾತ್ರಿಯ ಸಮಯದಲ್ಲಿ ರಾಗಿಮುದ್ದೆ ಸೇವನೆ ಮಾಡಿ ಮಲಗುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳು ಸಿಗುತ್ತವೆ. ಜೊತೆಗೆ ನಿಮ್ಮ ದೇಹದ ಉಷ್ಣಾಂಶ ತಗ್ಗಿ ತಂಪಾದ ವಾತಾವರಣ ನಿರ್ಮಾಣವಾಗುತ್ತದೆ.

​ಬಾಣಂತಿಯರಿಗೆ ತುಂಬಾ ಉತ್ತಮ

ಹೆರಿಗೆಯ ನಂತರ ಮಹಿಳೆಯರಿಗೆ ಹಾಲಿನ ಉತ್ಪತ್ತಿ ಅತ್ಯುತ್ತಮವಾಗಿ ನಡೆಯಬೇಕು. ಇದು ತಾಯಿಗೂ ಆರೋಗ್ಯಕರ ಮತ್ತು ಮಗುವಿಗೂ ಆರೋಗ್ಯಕರ. ತಾಯಿಯ ಎದೆ ಹಾಲಿನಲ್ಲಿ ಮಗುವಿನ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ಬಗೆಯ ಪೌಷ್ಟಿಕ ಸತ್ವಗಳು ಅಡಗಿರುತ್ತವೆ.

ರಾಗಿಯ ಖಾದ್ಯಗಳನ್ನು ಗರ್ಭಿಣಿ ಮಹಿಳೆ ಮತ್ತು ಬಾಣಂತಿ ಮಹಿಳೆ ತನ್ನ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ. ಎದೆ ಹಾಲಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ ಮತ್ತು ಇತರ ಅಮೈನೊ ಆಮ್ಲಗಳು ಸೇರುತ್ತವೆ.

​ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ಇಲ್ಲವಾಗುತ್ತದೆ

ರಾಗಿಯಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಇರುವುದರಿಂದ ದೇಹದ ಅಂಗಾಂಶಗಳು ಸರಿಯಾಗಿ ಕಾರ್ಯ ನಿರ್ವಹಣೆಯಾಗಲು ಇದು ಸಹಾಯವಾಗುತ್ತದೆ.

ಪ್ರತಿದಿನ ಕನಿಷ್ಠ ಒಂದು ಬಾರಿ ರಾಗಿಮುದ್ದೆ ತಿನ್ನುವುದರಿಂದ ತ್ವಚೆಯ ಕಾಂತಿ ಹೆಚ್ಚಾಗಿ ಒಣ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಬೇಸಿಗೆಗಾಲದಲ್ಲಿ ನಿಮ್ಮ ಚರ್ಮಕ್ಕೆ ರಕ್ಷಾ ಕವಚವಾಗಿ ರಾಗಿಯ ಉತ್ಪನ್ನ ನಿಮ್ಮ ದೇಹದಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಬಹುದು.

​ಕೊನೆಮಾತು

ಇತ್ತೀಚಿನ ಬದಲಾದ ಜೀವನ ಶೈಲಿಯಲ್ಲಿ ಮತ್ತು ಆಧುನಿಕ ಯುಗದ ಪ್ರಭಾವದಿಂದ ಜನರ ಆರೋಗ್ಯ ಮತ್ತು ಆಹಾರ ಪದ್ಧತಿ ಸಂಪೂರ್ಣವಾಗಿ ಬದಲಾವಣೆ ಕಂಡಿದೆ. ಇದ್ದಕ್ಕಿದ್ದಂತೆ ನಮ್ಮ ಆಹಾರ ಪದ್ಧತಿ ಬೇಕರಿ ಪದಾರ್ಥಗಳು ಮತ್ತು ಸ್ನಾಕ್ಸ್ ಸೇವನೆಯ ಕಡೆಗೆ ತಿರುಗುತ್ತಿದೆ.

ಇದರ ಮಧ್ಯೆ ರಸ್ತೆಬದಿಯ ಜಂಕ್ ಫುಡ್ ಗಳ ಹಾವಳಿ ಬೇರೆ. ಇಂತಹ ಸಂದರ್ಭಗಳಲ್ಲಿ ನಮ್ಮ ಆರೋಗ್ಯದ ಬಗ್ಗೆ ನಾವು ಸ್ವಲ್ಪವಾದರೂ ಕಾಳಜಿ ವಹಿಸುವ ಅಗತ್ಯತೆ ಇದೆ.

ಸಾಂಪ್ರದಾಯಿಕ ಅಡುಗೆಗಳನ್ನು ಸಂಪೂರ್ಣವಾಗಿ ಕೈಬಿಡಲು ಸಾಧ್ಯವಿಲ್ಲ. ಹಾಗಾಗಿ ಮನೆಯಲ್ಲಿನ ಹಿರಿಯರ ಮಾತಿನಂತೆ ಆರೋಗ್ಯಕರವಾದ ಆಹಾರ ಸೇವನೆ ನಮ್ಮ ಗುರಿಯಾಗಬೇಕು. ಅದರಲ್ಲಿ ರಾಗಿಮುದ್ದೆ ಕೂಡ ಸೇರಿರಬೇಕು ಎಂದರೆ ಅತಿಶಯೋಕ್ತಿಯಲ್ಲ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

8 months ago