Health

ದೇಹದ ತಂಪೆರೆವ ಸೊಗದೆ ಬೇರು! ಸೌಂದರ್ಯಕ್ಕೆ ಸಹಕಾರಿ ಇದು!

ಕಾಡಿನ ಮಧ್ಯೆ ಇರುವ ಒಂದಷ್ಟು ಮೂಲಿಕೆಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಆಸ್ಪತ್ರೆಗಳಿಗೆ ತೆರಳಿದರೂ ಕಡಿಮೆಯಾಗದ ಒಂದಷ್ಟು ಆರೋಗ್ಯ ಸಮಸ್ಯೆಗಳಿಗೆ ಮೂಲಿಕೆಗಳು ಪರಿಹಾರ ನೀಡುತ್ತವೆ. ಕೆಲವೊಮ್ಮೆ ಆ ರೀತಿಯ ಮೂಲಿಕೆಗಳು ನಮ್ಮ ಮನೆಯ ಬಳಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಮೂಲೆಗುಂಪಾಗುತ್ತದೆ. ಅಂತಹ ಅನೇಕ ಗಿಡಮೂಲಿಕೆಗಳಲ್ಲಿ ಸೊಗದೆ ಬೇರು ಕೂಡ ಒಂದು.

ಈ ಸೊಗದೆ ಬೇರು ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಬೆಟ್ಟ, ಗುಡ್ಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಳೆಗಾಲದ ಆರಂಭ ಇದರ ಬಳಕೆಗೆ ಪ್ರಶಸ್ತ ಕಾಲವಾಗಿದೆ. ಇದರ ಬೇರನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ.

ಮಾರುಕಟ್ಟೆಯಲ್ಲಿ ಈ ಸೊಗದೆ ಬೇರಿನ ಸಿರಪ್‌ ಸಿಗುತ್ತದೆ. ಹೀಗಾಗಿ ಆರಾಮದಲ್ಲಿ ಈ ಸಿರಪ್‌ನ್ನು ಮನೆಗೆ ತಂದು ಜ್ಯೂಸ್‌ ಮಾಡಿ ಕುಡಿದು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಹಾಗಾದರೆ ಈ ಸೊಗದೆ ಬೇರು ಯಾವೆಲ್ಲಾ ರೀತಿಯ ಆರೋಗ್ಯ ವೃದ್ಧಿಸುವ ಗುಣವನ್ನು ಹೊಂದಿದೆ ಎನ್ನುವ ಬಗ್ಗೆ ತಿಳಿದುಕೊಳ್ಳಿ ಇಲ್ಲಿದೆ ನೋಡಿ ಮಾಹಿತಿ.

ಪಿತ್ತ ನಿವಾರಕವಾಗಿದೆ

ಆಹಾರದಲ್ಲಿನ ವ್ಯತ್ಯಾಸ, ನಿದ್ದೆಗೆಡುವುದು ಹೀಗೆ ಹಲವು ಕಾರಣಗಳಿಂದ ದೇಹದಲ್ಲಿ ಪಿತ್ತ ಉಂಟಾಗುತ್ತದೆ. ಇದಕ್ಕೆ ಸೊಗದೆ ಬೇರು ಬಹುಬೇಗನೆ ಪರಿಹಾರ ನೀಡುತ್ತದೆ. ಸೊಗದೆ ಬೇರಿನ ಕಷಾಯ ಸೇವಿಸಿದರೆ ಒಂದೆರಡು ದಿನಗಳಲ್ಲಿ ಪಿತ್ತ ಶಮನವಾಗುತ್ತದೆ.

ಸೊಗದೆ ಬೇರನ್ನು ಜಜ್ಜಿಕೊಂಡು ನೀರಿಗೆ ಹಾಕಿ ಚೆನ್ನಾಗಿ ಹಾಕಿ ಕುದಿಸಿ ಅದಕ್ಕೆ ಬೆಲ್ಲ , ಲಿಂಬುರಸ ಸೇರಿಸಿ ಸೇವಿಸಿದರೆ ಪಿತ್ತವನ್ನು ಕಡಿಮೆ ಮಾಡಬಹುದಾಗಿದೆ.

ರಕ್ತಶುದ್ಧಿಯನ್ನು ಈ ಸೊಗದೆ ಮಾಡುತ್ತದೆ. ರಕ್ತದಲ್ಲಿನ ಕ್ರಿಮಿ ಕೀಟಗಳನ್ನು ನಾಶ ಪಡಿಸಿ ಚರ್ಮದ ಕಾಯಿಲೆಗಳಾದ ದದ್ದು, ಅಲರ್ಜಿ, ಪಿತ್ತದ ಗುಳ್ಳೆಗಳನ್ನು ನಿವಾರಿಸುತ್ತದೆ.

​ತಾಯಂದಿರ ಎದೆ ಹಾಲು ಹೆಚ್ಚಿಸುತ್ತದೆ

ಕೆಲವು ಬಾಣಂತಿಯರಲ್ಲಿ ತಿಂಗಾಳದರೂ ಎದೆಹಾಲು ಸರಿಯಾಗಿ ಉತ್ಪತ್ತಿಯಾಗಿರುವುದಿಲ್ಲ. ಇದಕ್ಕೆ ಸೊಗದೆ ಬೇರು ಉತ್ತಮ ಮನೆಮದ್ದಾಗಿದೆ. ಸೊಗದೆ ಬೇರನ್ನು ನೀಡಿದರೆ ಹಾಲಿನ ಉತ್ಪತ್ತಿಯಾಗುತ್ತದೆ. ಜೊತೆಗೆ ಎದೆಹಾಲಿನ ದೋಷವಿದ್ದರೆ ನಿವಾರಣೆಯಾಗಿ ಹಾಲು ಕೂಡ ಶುದ್ಧವಾಗುತ್ತದೆ.

ಸೊಗದೆ ಬೇರಿನ ಪುಡಿಯನ್ನು ಅಥವಾ ಚೂರ್ಣವನ್ನು ಆಕಳ ಹಾಲಿನಲ್ಲಿ ಬೆರೆಸಿ ಬಾಣಂತಿಯರಿಗೆ ನೀಡಬೇಕು. ಆದಷ್ಟು ಹಸಿ ಹಾಲಿನಲ್ಲಿ, ಖಾಲಿ ಹೊಟ್ಟೆಯಲ್ಲಿ ನೀಡುವುದು ಒಳ್ಳೆಯದು. ಆಯುರ್ವೇದದಲ್ಲಿಯೂ ಎದೆಹಾಲಿನ ಉತ್ಪತ್ತಿಗೆ ಸೊಗದೆ ಬೇರನ್ನು ಬಳಸಲಾಗುತ್ತದೆ.

​ಉರಿಮೂತ್ರ ಸಮಸ್ಯೆಗೆ ಪರಿಹಾರ

ಸಾಮಾನ್ಯವಾಗಿ ದೇಹ ಉಷ್ಣತೆಯಿಂದ ಕೂಡಿದ್ದರೆ ಬೇಸಿಗೆಯ ಸಮಯದಲ್ಲಿ ಉರಿಮೂತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸೊಗದೆ ಬೇರು ಪರಿಹಾರ ನೀಡುತ್ತದೆ.

ಉರಿಮೂತ್ರ ಉಂಟಾದರೆ ಇದರ ಚೂರ್ಣವನ್ನು 3 ರಿಂದ 6 ಗ್ರಾಂನಷ್ಟು ತೆಗೆದುಕೊಂಡು ಎಳನೀರು ಅಥವಾ ಹಾಲಿನಲ್ಲಿ ಸೇರಿಸಿ ಕುಡಿದರೆ ದೇಹ ತಂಪಾಗಿ ಉರಿಮೂತ್ರದ ಸಮಸ್ಯೆ ನಿವಾರಣೆಯಾಗುತ್ತದೆ.

ಅತಿಯಾದ ಬಾಯಾರಿಕೆಯಾದರೂ ಈ ಸೊಗದೆ ಬೇರಿನ ಕಷಾಯ ಮಾಡಿ ಸೇವಿಸಬಹುದು. ಇದರಿಂದ ದೇಹದಲ್ಲಿನ ಅನುಪಯುಕ್ತ ವಸ್ತುಗಳು ಮೂತ್ರದಲ್ಲಿ ಹೋರಹೋಗುವಂತೆ ಇದು ಮಾಡುತ್ತದೆ. ನಿಶ್ಯಕ್ತಿ ನಿವಾರಣೆಯಾಗುತ್ತದೆ.

​ಬಾಯಿಹುಣ್ಣಿಗೂ ಪರಿಹಾರ

ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಅಥವಾ ಪಿತ್ತವಾಗಿದ್ದರೆ ಬಾಯಿಯಲ್ಲಿ ಹುಣ್ಣುಗಳಾಗುತ್ತವೆ. ಅಗಾಧ ನೋವು, ಹಿಂಸೆಯನ್ನು ನೀಡುವ ಹುಣ್ಣುಗಳನ್ನು ಗುಣವಾಗಿಸಲು ಸೊಗದೆ ಬೇರು ಉತ್ತಮ ಮನೆಮದ್ದಾಗಿದೆ..

ಮಂಡಿಯೂತಕ್ಕೆ ಕೂಡ ಈ ಸೊಗದೆ ಬೇರಿನಿಂದ ಪರಿಹಾರ ಸಿಗುತ್ತದೆ. ಸೊಗದೆ ಬೇರಿನ ಪುಡಿಯನ್ನು ನೀರಿನಲ್ಲಿ ಕಲಸಿ ಹಚ್ಚಿದರೆ ಮಂಡಿಯೂತ ಮತ್ತು ನೋವು ಕೆಲವು ದಿನಗಳಲ್ಲಿ ನಿವಾರಣೆಯಾಗುತ್ತದೆ.

​ವೀರ್ಯ ವೃದ್ಧಿಗೆ ಸಹಕಾರಿಯಾಗಿದೆ

ಈ ಸೊಗದೆ ಬೇರುಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಇಟ್ಟುಕೊಂಡು ಪ್ರತಿದಿನ ಈ ಚೂರ್ಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ವೀರ್ಯವೃದ್ಧಿಗೆ ಸಹಕಾರಿಯಾಗಿದೆ. ದೇಹದ ಉಷ್ಣತೆಯನ್ನು ಹೊರಹಾಕಲು ಕೂಡ ಈ ಸೊಗದೆ ಬೇರು ನೆರವಾಗುತ್ತದೆ.

ಇದನ್ನು ಕನ್ನಡದಲ್ಲಿ ಹಾಲುಬಳ್ಳಿ ಬೇರು, ಸುಗಂಧಿ ಬೇರು, ಸೊಗದೆ ಬೇರು, ಅನಂತ ಮೂಲ, ನಾಮ ಬೇರು ಹೀಗೆ ಹಲವು ಹೆಸರುಗಳಲ್ಲಿ ಕರೆಯುತ್ತಾರೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago