ಕಾಡು ಜೇನು ಹಾಗೂ ಸಾಮಾನ್ಯವಾಗಿ ಸಿಗುವ ಎರಡೂ ಜೇನನ್ನು ಜೇನು ಹುಳಗಳೇ ತಯಾರಿಸುವುದು. ಆದರೆ ಸಾಮಾನ್ಯವಾಗಿ ಸಿಗುವ ಜೇನಿಗಿಂತ ಕಾಡುಜೇನು ತುಂಬಾನೇ ಆರೋಗ್ಯಕರ. ಏಕೆಂದರೆ ಕಾಡುಜೇನಿನಲ್ಲಿ ಪೋಷಕಾಶಗಳು ಅಧಿಕ ಇರುತ್ತವೆ. ಏಕೆಂದರೆ ಕಾಡು ಜೇನು ನೊಣಗಳಿಗೆ ಕಾಡಿನಲ್ಲಿ ಹಲವಾರು ಔಷಧೀಯ ಗಿಡಗಳ ಹೂವಿನ ರಸ ಸಿಗುತ್ತದೆ, ಅವುಗಳನ್ನು ಸಂಗ್ರಹಿಸಿ ಜೇನು ತಯಾರಿಸುತ್ತದೆ, ಹೀಗಾಗಿ ಕಾಡಿನ ಜೇನಿನಲ್ಲಿ ಪೋಷಕಾಂಶಗಳು ತುಂಬಾನೇ ಅಧಿಕವಾಗಿರುತ್ತದೆ.
ಕಾಡು ಜೇನಿನಲ್ಲಿರುವ ಪೋಷಕಾಂಶಗಳು
ಕಾಡುಜೇನಿನಲ್ಲಿ ಸಾಮಾನ್ಯವಾಗಿ 22 ಅಮೈನೋ ಆಮ್ಲ, 31 ಭಿನ್ನ ಖನಿಜಾಂಶಗಳು ಹಾಗೂ ಅನೇಕ ಬಗೆಯ ವಿಟಮಿನ್ಸ್ ಇರುತ್ತವೆ. ಅಲ್ಲದೆ ಕಾಡು ಜೇನಿನಲ್ಲಿ ಮಾತ್ರ 30 ಬಗೆಯ ಬಯೋಆಕ್ಟಿವ್ ಸಸ್ಯಗಳ ಅಂಶಗಳಿರುತ್ತದೆ. ಅಲ್ಲದೆ ಇದರಲ್ಲಿ ಪಾಲಿಫೀನೋಲ್ಸ್ ಎಂಬ antioxidants ಇರುತ್ತದೆ. ಈ ಆ್ಯಂಟಿಆಕ್ಸಿಡೆಂಟ್ ಹೃದಯಾಘಾತ, ಕ್ಯಾನ್ಸರ್ ಈ ಬಗೆಯ ಕಾಯಿಲೆ ತಡೆಗಟ್ಟುವ ಔಷಧೀಯ ಗುಣವನ್ನು ಹೊಂದಿದೆ.
ಈ ಜೇನಿನಲ್ಲಿರುವ ಪೋಷಕಾಂಶಗಳು
ಸಾಮಾನ್ಯ ಜೇನಿನಲ್ಲಿ ಪಾಲಿಫೀನೋಲ್ಸ್ ಇರಲ್ಲ
ಫಾಲಿಫೀನೋಲ್ಸ್ ಲಿವರ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಆದರೆ ಇದು ಸಾಮಾನ್ಯ ಜೇನಿನಲ್ಲಿ ಇರಲ್ಲ, ಕಾಡು ಜೇನಿನಲ್ಲಿ ಮಾತ್ರ ಕಂಡು ಬರುವುದು.
ಕಾಡು ಜೇನಿನ ಪ್ರಯೋಜನಗಳು
ಸಾಮಾನ್ಯ ಜೇನಿನಲ್ಲಿ ಸಕ್ಕರೆಯಂಶ ಇರಬಹುದು
ಜೇನು ಕೃಷಿ ಮಾಡುವವರು ಕೆಲವೊಂದು ಸೀಸನ್ನಲ್ಲಿ (ಮಳೆಗಾಲ) ಜೇನುನೊಣಗಳಿಗೆ ಸಕ್ಕರೆ ನೀರು ಮಾಡಿ ಅವುಗಳಿಗೆ ಸೇವಿಸಲು ನೀಡಲಾಗುವುದು. ಅಲ್ಲದೆ ಈ ಜೇನು ನೊಣಗಳಿಗೆ ಕಾಡು ಜೇನು ನೊಣಗಳಿಗೆ ಸಿಗುವಷ್ಟು ಬಗೆ ಬಗೆಯ ಹೂಗಳ ರಸ ಸಿಗುವುದಿಲ್ಲ. ಆದ್ದರಿಂದ ಕಾಡುಜೇನು ಹೆಚ್ಚು ಆರೋಗ್ಯಕರ.
ಕಾಡುಜೇನು ಕೆಲವೊಮ್ಮೆ ಈ ಬಗೆಯ ಅಡ್ಡಪರಿಣಾಮ ಬೀರಬಹುದು:
ಕಾಡುಜೇನನ್ನು ಒಂದು ವರ್ಷದ ಕೆಳಗಿನ ಮಕ್ಕಳಿಗೆ ಕೊಡಬಾರದು ಎಂದು ಹೇಳಲಾಗುವುದು. ಏಕೆಂದರೆ ಇದರಲ್ಲಿ (ಕ್ಲೋಸ್ಟ್ರಿಡಿಯಮ್ ಬೊಟುಲಿನಮ್) ಎಂಬ ಬ್ಯಾಕ್ಟಿರಿಯಾ ಇರುತ್ತದೆ, ಇದು ಮಕ್ಕಳಿಗೆ ಒಳ್ಳೆಯದಲ್ಲ. ಕಾಡುಜೇನು ತಿಂದಾಗ ಬೇಧಿ, ವಾಂತಿ ಈ ಬಗೆಯ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ.
ಒಂದು ವರ್ಷದ ಕೆಳಗಿನ ಮಕ್ಕಳನ್ನು ಜೇನು ಕೊಟ್ಟರೆ ಈ ಅಪಾಯಗಳಿವೆ
ಕೆಲವರು ಕಾಡು ಜೇನು ಎಂದು ಮೋಸ ಮಾಡುತ್ತಾರೆ, ಜೇನಿನ ಶುದ್ಧತೆ ಕಂಡು ಹಿಡಿಯುವುದು ಹೇಗೆ?
ಹೆಬ್ಬರಳಿನಿಂದ ಪರೀಕ್ಷೆ ಮಾಡಿ: ಸ್ವಲ್ಪ ಜೇನನ್ನು ನಿಮ್ಮ ಹೆಬ್ಬರಳಿಗೆ ಹಾಕಿ, ಅದು ನೀರಿನಿಂತೆ ಹರಿದರೆ ಅದು ಶುದ್ಧವಾದ ಜೇನಲ್ಲ.
ನೀರಿನ ಪರೀಕ್ಷೆ: ಒಂದು ಲೋಟ ನೀರಿಗೆ ಒಂದು ಚಮಚ ಜೇನು ಹಾಕಿ, ಅದು ಹಾಕಿದಾಗ ನೀರಿನಲ್ಲಿ ಕರಗಿದರೆ ಶುದ್ಧ ಜೇನಲ್ಲ, ಶುದ್ಧ ಜೇನು ತಳದಲ್ಲಿ ಹೋಗಿ ನಿಲ್ಲುತ್ತೆ.
ವಿನೆಗರ್ ಪರೀಕ್ಷೆ: ಸ್ವಲ್ಪ ಜೇನನ್ನು ವಿನೆಗರ್ ಜೊತೆ ಮಿಕ್ಸ್ ಮಾಡಿದಾಗ ಜೇನಿನಲ್ಲಿ ನೊರೆ ಬಂದರೆ ಅದು ಶುದ್ಧ ಜೇನಲ್ಲ
ಬಿಸಿ ಮಾಡಿ ಪರೀಕ್ಷಿಸುವುದು: ಒಂದು ಬೆಂಕಿಕಡ್ಡಿ ತೆಗೆದು ಜೇನಿನಲ್ಲಿ ಅದ್ದಿ ಬೆಂಕಿಗೆ ಹಿಡಿಯಿರಿ, ಜೇನು ಉರಿಯುವುದಿಲ್ಲ, ಉರಿದರೆ ಅದು ಶುದ್ಧ ಜೇನಲ್ಲ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…