Health

ಯಾವ ಪಾತ್ರೆ ಖರೀದಿಸಿದರೆ ಅರೋಗ್ಯಕ್ಕೆ ಉತ್ತಮ?

ನಮ್ಮ ಆರೋಗ್ಯ, ನಿಮ್ಮ ಜೀವನ, ನಾವು ತಿನ್ನುವ ಆಹಾರದಲ್ಲಿ ಅಡಗಿರುತ್ತದೆ ಎಂದರೆ ನೀವು ನಂಬಲೇಬೇಕು. ಏಕೆಂದರೆ ಆರೋಗ್ಯಕ್ಕಿಂತ ಮಹಾ ಭಾಗ್ಯ ಮತ್ತೊಂದಿಲ್ಲ. ನಾವು ಇಂದು ನಮಗೆ ಕಣ್ಣಿಗೆ ಬೇಕಾದ ರುಚಿ ರುಚಿಯ ಆಹಾರಗಳನ್ನು ತಯಾರು ಮಾಡಿಕೊಂಡು ತಿನ್ನುತ್ತೇವೆ.

ಯಾವುದು ಆರೋಗ್ಯಕರ ಮತ್ತು ಅನಾರೋಗ್ಯಕರ ಎಂದು ನಮಗೆ ಚೆನ್ನಾಗಿ ಗೊತ್ತು. ಆದರೆ ಯಾವ ಪಾತ್ರೆಗಳಲ್ಲಿ ಅಡುಗೆ ಮಾಡಿ ಸವಿದರೆ ನಮಗೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನಾವು ಸಾಧ್ಯವಾದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು.

ಏಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ನಮಗೆ ಪರಿಚಿತವಿಲ್ಲದ ಹೊಸ ಬಗೆಯ ಅಡುಗೆ ಪಾತ್ರೆಗಳಲ್ಲಿ ಆಹಾರ ತಯಾರಿ ಮಾಡಿ ತಿನ್ನಲು ಮುಂದಾಗುತ್ತೇವೆ. ಆದರೆ ಇಂದು ನಾವು ಅಡುಗೆಗೆ ಬಳಸುವ ಆಹಾರ ಸಾಮಗ್ರಿಗಳು ರಾಸಾಯನಿಕ ಅಂಶಗಳಿಂದ ತುಂಬಿರುತ್ತವೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಅಡುಗೆ ಪಾತ್ರೆಗಳು ಕೂಡ ಅಪ್ಪಟ ರೂಪದಲ್ಲಿ ನಮಗೆ ಸಿಗುತ್ತಿಲ್ಲ. ಹಾಗಾಗಿ ಆರೋಗ್ಯಕರವಾದ ವಾತಾವರಣ ಇಂದು ನಮ್ಮೆಲ್ಲರಿಂದ ಮರೆಯಾಗುತ್ತಿದೆ.

ಹಾಗಾಗಿ ಇಂದು ನಾವು ಅಡುಗೆ ಮಾಡಲು ಬಳಸುವ ಪಾತ್ರೆಗಳ ಬಗ್ಗೆ ಮತ್ತು ಅವುಗಳಿಂದ ನಮಗೆ ಉಂಟಾಗುವ ಆರೋಗ್ಯದ ಲಾಭಗಳ ಬಗ್ಗೆ ಮೊದಲು ಅವಲೋಕನ ಮಾಡಬೇಕು. ನಿಮಗಾಗಿ ಅಂತಹ ವಿಚಾರಗಳು ಈ ಲೇಖನದಲ್ಲಿ ಅಡಕವಾಗಿವೆ.

​ತಾಮ್ರದ ಪಾತ್ರೆ

ತಾಮ್ರದ ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುವುದು ಒಂದು ಸಾಂಪ್ರದಾಯಿಕ ಪದ್ಧತಿ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಹೆಚ್ಚಾಗಿವೆ.

ಇದೇ ಕಾರಣಕ್ಕೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇಡೀ ರಾತ್ರಿ ಒಂದು ತಾಮ್ರದ ಚೊಂಬಿನಲ್ಲಿ ನೀರು ಎಷ್ಟು ಕುಡಿಯಬೇಕು ಎಂದು ಹೇಳುತ್ತಾರೆ.

ಏಕೆಂದರೆ ಇದರಲ್ಲಿ ಕಂಡು ಬರುವ ಔಷಧೀಯ ಗುಣ ಲಕ್ಷಣಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿ, ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ತಡೆದು, ದೇಹದಲ್ಲಿ ಉಂಟಾಗಿರುವ ಗಾಯಗಳನ್ನು ಬಹಳ ಬೇಗನೆ ವಾಸಿಯಾಗುವಂತೆ ಮಾಡುತ್ತವೆ.

ಇದರಲ್ಲಿ ತಾಮ್ರ ತನ್ನ ಪ್ರಭಾವದಿಂದ ದೇಹದಲ್ಲಿರುವ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡುತ್ತದೆ.

ಇಂದು ಅಡುಗೆಗಾಗಿ ಅಥವಾ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನುವ ಸಲುವಾಗಿ ನಾವು ತಾಮ್ರದ ಪಾತ್ರೆಗಳನ್ನು ಬಳಕೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ನಾವು ತಯಾರು ಮಾಡುವ ಅಡುಗೆಯ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ ಆರೋಗ್ಯಕರ ಆಹಾರ ತಿನ್ನುತ್ತಿದ್ದೇವೆ ಎನ್ನುವ ತೃಪ್ತಿ ಕೂಡ ನಮ್ಮದಾಗುತ್ತದೆ.

​ಬೆಳ್ಳಿ

ಈಗಿನ ಕಾಲಕ್ಕೆ ನೋಡಿದರೆ ಬೆಳ್ಳಿ ಸ್ವಲ್ಪ ದುಬಾರಿ ವಸ್ತು ಎನಿಸುತ್ತದೆ. ಇದರಲ್ಲಿ ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಸಾಕಷ್ಟಿವೆ. ದೇಹಕ್ಕೆ ತಂಪಿನ ವಾತಾವರಣವನ್ನು ಬೆಳ್ಳಿಯ ಪಾತ್ರೆಯಲ್ಲಿ ತಯಾರು ಮಾಡಿದ ಅಡುಗೆ ಒದಗಿಸುತ್ತದೆ ಎಂದು ನಂಬಬಹುದು.

ಯಾರಿಗೆ ಅತಿಯಾದ ವಾತ, ಪಿತ್ತ ಸಮಸ್ಯೆಗಳು ಇರುತ್ತವೆ ಅಂತಹವರು ದಿನದಲ್ಲಿ ಕನಿಷ್ಠ ಒಂದು ಹೊತ್ತು ಬೆಳ್ಳಿ ಪಾತ್ರೆಯಲ್ಲಿ ಅಡುಗೆ ತಯಾರು ಮಾಡಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.

ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವವರು ಸಹ ಬೆಳ್ಳಿ ಪಾತ್ರೆಯಲ್ಲಿ ಆಹಾರ ತಯಾರಿ ಮಾಡಬೇಕು ಮತ್ತು ಬೆಳ್ಳಿತಟ್ಟೆಯಲ್ಲಿ ತಿನ್ನಬೇಕು ಎಂದು ಹೇಳುತ್ತಾರೆ. ಇದು ನಿಮ್ಮ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತಮ ಪಡಿಸಿ ನಿಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

​ಕಂಚಿನ ಪಾತ್ರೆಗಳು

ಒಂದು ವೇಳೆ ನಿಮ್ಮ ಹತ್ತಿರದಲ್ಲಿ ಯಾರಾದರೂ ಹಳೆಯ ಕಾಲದ ವಯಸ್ಸಾದವರು ವಾಸವಿದ್ದರೆ ಅವರ ಬಳಿ ಕಂಚಿನ ಪಾತ್ರೆಗಳು ಸಿಗುತ್ತವೆ ಎಂದು ಹೇಳಬಹುದು.

ಬಹುತೇಕ ಶುಭ ಸಮಾರಂಭಗಳಿಗೆ ಬಳಕೆ ಮಾಡುವ ಪಾತ್ರೆಗಳು ಒಂದು ಕಾಲದಲ್ಲಿ ಇವುಗಳೇ ಆಗಿದ್ದವು. ಆದರೆ ಕಂಚಿನ ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಷ್ಟು ಹಿತಕರವಲ್ಲ ಎಂದು ಹೇಳುತ್ತಾರೆ.

ಇದಕ್ಕೆ ಕಾರಣ ಎಂದರೆ ನಾವು ಅಡುಗೆಗೆ ಬಳಸುವ ಉಪ್ಪು ಕಂಚಿನ ಲೋಹದ ಜೊತೆಗೆ ಬಹಳ ಬೇಗನೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಕೊಂಡು ನಮ್ಮ ಆರೋಗ್ಯವನ್ನು ಹಾಳು ಮಾಡುವ ಅಂಶವಾಗಿ ಬದಲಾಗುತ್ತದೆ. ಹಾಗಾಗಿ ಇಂತಹ ಪಾತ್ರೆಗಳನ್ನು ಕೇವಲ ಊಟವನ್ನು ಬಡಿಸಲು ಮಾತ್ರ ಬಳಸುವುದು ಸೂಕ್ತ ಎಂದು ವಿಜ್ಞಾನ ಹೇಳುತ್ತದೆ.

​ಸ್ಟೇನ್ಲೆಸ್ ಸ್ಟೀಲ್

ಈಗಂತೂ ಬಹುತೇಕ ಜನರ ಮನೆಯಲ್ಲಿ ಸ್ಟೀಲ್ ಪಾತ್ರೆಗಳು ಅಡುಗೆ ಮಾಡಲು ಬಳಕೆಯಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಎಂದರೆ ನಾವು ಅಡುಗೆಗೆ ಬಳಸುವ ಯಾವುದೇ ಆಹಾರ ಪದಾರ್ಥಗಳು ಸ್ಟೀಲ್ ಜೊತೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗುವುದಿಲ್ಲ ಮತ್ತು ನಮ್ಮ ಆರೋಗ್ಯಕ್ಕೆ ತೊಂದರೆ ಉಂಟು ಮಾಡುವುದಿಲ್ಲ.

ಹಾಗಾಗಿ ಸ್ಟೀಲ್ ಪಾತ್ರೆಯಲ್ಲಿ ಅಡುಗೆ ಮಾಡುವುದು ಅಥವಾ ಬಡಿಸುವುದು ಅಥವಾ ಸ್ಟೀಲ್ ಲೋಟದಲ್ಲಿ ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಸುರಕ್ಷಿತ ಎಂದು ಹೇಳಬಹುದು. ಒಂದು ಸ್ಟೀಲ್ ಲೋಟ ನಿಮ್ಮ ಕೈಯಲ್ಲಿ ಇದೆ ಎಂದರೆ ಅದರಲ್ಲಿ ಸುಮಾರು ನಾಲ್ಕು ಬಗೆಯ ಅಂಶಗಳು ಸೇರಿರುತ್ತವೆ.

ಉದಾಹರಣೆಗೆ ಕ್ರೋಮಿಯಂ, ನಿಕಲ್, ಕಾರ್ಬನ್ ಮತ್ತು ಸಿಲಿಕಾನ್. ಒಂದು ವೇಳೆ ನೀವು ಅಡುಗೆ ಮಾಡಲು ಸ್ಟೀಲ್ ಪಾತ್ರೆಯನ್ನು ಬಳಸುತ್ತಿದ್ದೀರಿ ಎಂದಾದರೆ ತಳಭಾಗದಲ್ಲಿ ಅಲುಮಿನಿಯಂ ಅಥವಾ ತಾಮ್ರದ ಲೇಪನ ಮಾಡಿರುತ್ತಾರೆ. ಹಾಗಾಗಿ ಇವುಗಳು ಸಹ ನಿಮ್ಮ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಬಹುದು.

​ಅಲ್ಯೂಮಿನಿಯಂ ಪಾತ್ರೆ

ಅಲ್ಲುಮಿನಿಯಂ ಅಡುಗೆ ತಯಾರಿಕಾ ವಸ್ತುಗಳನ್ನು ಬಡ ಹಾಗೂ ಮಧ್ಯಮ ವರ್ಗದ ಸ್ನೇಹಿತ ಎಂದು ಕರೆಯಬಹುದು. ಏಕೆಂದರೆ ಅಡುಗೆಯಲ್ಲಿ ಬಹುತೇಕ ಬಳಕೆಯಾಗುವ ಮತ್ತು ಸಾಧಾರಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುವ ಪಾತ್ರೆಗಳು ಎಂದರೆ ಅದು ಅಲುಮಿನಿಯಂ ಪಾತ್ರೆಗಳು ಎಂದು ಹೇಳಬಹುದು.

ಎಲ್ಲರಿಗೂ ಅತ್ಯಂತ ಪ್ರಿಯವಾಗಿರುವ ಅಲ್ಯುಮಿನಿಯಂ ಪಾತ್ರೆಗಳು ಇಂದು ನಮ್ಮ ಜೀವನದಲ್ಲಿ ಅತಿ ಹೆಚ್ಚಿನ ಪ್ರಭಾವ ಬೀರಿವೆ ಎಂದರೆ ನಾವೆಲ್ಲರೂ ನಂಬಲೇಬೇಕು.

ಅಡುಗೆ ತಯಾರಿ ಮಾಡುವಾಗ ಸಹ ಈ ಪಾತ್ರೆಗಳು ತಮ್ಮ ಅಲುಮಿನಿಯಂ ಅಂಶವನ್ನು ಆಹಾರ ಪದಾರ್ಥಗಳಿಗೆ ಬಿಡುಗಡೆ ಮಾಡುವುದಿಲ್ಲ. ಹಾಗಾಗಿ ಕೋಟಿಂಗ್ ರಹಿತ ಅಲುಮಿನಿಯಂ ಪಾತ್ರೆಗಳು ಹೆಚ್ಚು ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಅಷ್ಟು ಸೂಕ್ತವಲ್ಲ.

​ಕಬ್ಬಿಣದ ಅಡುಗೆ ಪಾತ್ರೆಗಳು

ಐದಾರು ದಶಕಗಳ ಹಿಂದೆ ಮಣ್ಣಿನ ಪಾತ್ರೆಗಳನ್ನು ಬಳಕೆ ಮಾಡುತ್ತಿದ್ದ ನಂತರದಲ್ಲಿ ಉಪಯೋಗಿಸಲು ಮುಂದಾಗಿದ್ದ ಪಾತ್ರೆಗಳು ಇವು ಎಂದು ಹೇಳಬಹುದು. ಅತಿಹೆಚ್ಚಿನ ತಾಪಮಾನವನ್ನು ಒಳಗೊಂಡ ಮತ್ತು ನಿಧಾನವಾಗಿ ಅಡುಗೆಯನ್ನು ಬೇಯಿಸುತ್ತದೆ.

ಕಬ್ಬಿಣದ ಬಾಣಲೆ, ಕಬ್ಬಿಣದ ತವಾ ಇತ್ಯಾದಿಗಳನ್ನು ಜನರ ಬಳಕೆಯಲ್ಲಿ ನೋಡಬಹುದು. ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗಿರುವವರು ನಿತ್ಯ ಕಬ್ಬಿಣದ ಯಾವುದಾದರೂ ಒಂದು ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುವ ಅಭ್ಯಾಸ ಇಟ್ಟುಕೊಳ್ಳಬೇಕು.

ಆದರೆ ಯಾವುದೇ ಕಾರಣಕ್ಕೂ ತಯಾರು ಮಾಡಿದ ಅಡುಗೆಯನ್ನು ಕಬ್ಬಿಣದ ಪಾತ್ರೆಯಲ್ಲಿ ಶೇಖರಣೆ ಮಾಡಬಾರದು. ಇದರಿಂದ ಆಹಾರ ಪದಾರ್ಥಗಳ ರುಚಿ ಸಂಪೂರ್ಣವಾಗಿ ಬದಲಾಗಲಿದೆ.

​ನಾನ್ ಸ್ಟಿಕ್ ಪಾತ್ರೆಗಳು

ಈಗಿನ ಆಧುನಿಕ ಯುಗದ ಅಡುಗೆ ಪಾತ್ರೆಗಳು ಇವಾಗಿವೆ. ಈ ಪಾತ್ರೆಗಳನ್ನು ಯಾವುದೇ ಲೋಹದಿಂದ ತಯಾರು ಮಾಡುತ್ತಾರೆ. ಆದರೆ ಸ್ವಚ್ಛ ಮಾಡಿಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮೇಲ್ಭಾಗದಲ್ಲಿ ಟೆಫ್ಲಾನ್ ಎಂಬ ರಾಸಾಯನಿಕ ಅಂಶದ ಕೋಟಿಂಗ್ ಮಾಡಿರುತ್ತಾರೆ.

ಇಂದಿನ ಬದಲಾದ ಜೀವನ ಶೈಲಿಯಲ್ಲಿ ಜೀವಿಸುತ್ತಿರುವ ಸಾಕಷ್ಟು ಜನರು ಇವುಗಳಿಂದ ಅಡುಗೆ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ಭಾವನೆಯಲ್ಲಿದ್ದಾರೆ.

ಆದರೆ ಇತ್ತೀಚಿನ ಕೆಲವೊಂದು ಆರೋಗ್ಯಕ್ಕೆ ಸಂಬಂಧ ಪಟ್ಟ ವರದಿಗಳು ಹೇಳುವ ಪ್ರಕಾರ ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಪಾತ್ರೆಗಳಲ್ಲಿ ಅಡುಗೆ ಮಾಡಲು ಹೋದರೆ ಟೆಫ್ಲಾನ್ ಅಂಶ ಆಹಾರದಲ್ಲಿ ಬೆರೆತು ಕ್ಯಾನ್ಸರ್ ಸಂಭವವನ್ನು ಉಂಟು ಮಾಡುತ್ತದೆ.

​ಗಾಜಿನ ವಸ್ತುಗಳು

ಕಡಿಮೆ ತಾಪಮಾನದಲ್ಲಿ ಅಡುಗೆ ಬೇಯಿಸ ಬಹುದಾದ ಪಾತ್ರೆಗಳು ಎಂದು ಇವುಗಳನ್ನು ಕರೆಯಬಹುದು. ಗಾಜಿನ ಅಡುಗೆ ಸಾಮಗ್ರಿಗಳು ತಮ್ಮಲ್ಲಿ ಲೋಹದ ಅಂಶವನ್ನು ಹೊಂದಿಲ್ಲದೆ ಇದ್ದರೂ ಸಹ ಒಲೆಯ ಬಿಸಿಯನ್ನು ಅಡುಗೆಗೆ ಅಚ್ಚುಕಟ್ಟಾಗಿ ಮುಟ್ಟಿಸುವ ಕೆಲಸ ಮಾಡುತ್ತದೆ.

ಯಾವುದೇ ಆಹಾರವನ್ನು ಶೇಖರಣೆ ಮಾಡಲು ಅಥವಾ ಬೇಯಿಸಲು ಇದು ಅನುಕೂಲಕಾರಿ ಎಂದು ಹೇಳಬಹುದು.

ಅತ್ಯಂತ ಹೆಚ್ಚಿನ ತಾಪಮಾನ ಗಾಜಿನ ಪಾತ್ರೆಗಳನ್ನು ಒಡೆದು ಹಾಕುವ ಸಾಧ್ಯತೆ ಇರುತ್ತದೆ. ಜೊತೆಗೆ ನೀವು ಸಹ ಕೈತಪ್ಪಿ ಮನೆಗಳಲ್ಲಿ ಇವುಗಳನ್ನು ಬೀಳಿಸಿ ಒಡೆದು ಹಾಕಬಹುದು. ಹಾಗಾಗಿ ಇದರ ಬಗ್ಗೆ ಎಚ್ಚರವಹಿಸಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago