Categories: Latest

ಸಕ್ಕರೆ ಕಾಯಿಲೆಗೆ ಬೆಸ್ಟ್ ತರಕಾರಿಗಳು ಇವುಗಳನ್ನು ಸೇವಿಸಿ ಯಾಕಂದ್ರೆ!

ಹಿಂದೆ ನಮ್ಮ ತಾತ ಅಜ್ಜಿಯರ ಕಾಲದಲ್ಲಿ ಸಕ್ಕರೆ ಕಾಯಿಲೆ ಎಂದರೆ ಶ್ರೀಮಂತರ ಕಾಯಿಲೆ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಇದು ತುಂಬಾ ಕಡಿಮೆ ಪ್ರಮಾಣದಲ್ಲಿ ಜನರಿಗೆ ಕಾಣಿಸುತ್ತಿತ್ತು. ಆದರೆ, ಈಗಿನ ಪ್ರಪಂಚದಲ್ಲಿ ಸಕ್ಕರೆಕಾಯಿಲೆ ಇಲ್ಲದಿರುವ ಮನುಷ್ಯರನ್ನು ಹುಡುಕಲೇ ಕಷ್ಟವಾಗುತ್ತದೆ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿ,ಒತ್ತಡದ ಜೀವನ, ಬೊಜ್ಜು ಇವುಗಳಿಂದ ಸಕ್ಕರೆ ಕಾಯಿಲೆಯು ಹಲವು ಜನರನ್ನು ಬಾಧಿಸುತ್ತಿರುವುದು ಸುಳ್ಳಲ್ಲ. ವಯಸ್ಕರಷ್ಟೇ ಅಲ್ಲದೆ ಕೆಲವು ಈಗ ತಾನೆ ಜನಿಸಿದ ಶಿಶುಗಳಲ್ಲಿಯೂ ಕೂಡ ಸಕ್ಕರೆ ಕಾಯಿಲೆಯನ್ನು ನೋಡುತ್ತಿರುವುದು ದುರದೃಷ್ಟಕರ. ಇದು ಅನುವಂಶೀಯ ಕಾಯಿಲೆಯೂ ಹೌದು.
ಔಷಧಿಗಳಷ್ಟೇ ಅಲ್ಲದೆ ಮನೆಮದ್ದುಗಳನ್ನು ನಾವು ಹಲವು ಬಾರಿ ಹುಡುಕುತ್ತಿರುತ್ತೇವೆ .ಸಕ್ಕರೆ ಕಾಯಿಲೆ ಅಷ್ಟೇ ಅಲ್ಲದೆ ಆರೋಗ್ಯಕ್ಕೆ ಹಲವು ಉಪಯೋಗಗಳನ್ನು ನೀಡುವ ಹಾಗಲಕಾಯಿಯನ್ನು ತಿನ್ನುವುದು ಅಥವಾ ಕುಡಿಯುವುದು ಹಲವಾರು ಜನರಿಗೆ ಕಷ್ಟಕರವಾದ ವಿಷಯ. ಏಕೆಂದರೆ, ಇದು ತುಂಬಾ ಕಹಿಯಾಗಿರುತ್ತದೆ.

​ಖಾಲಿಹೊಟ್ಟೆಯಲ್ಲಿ ಹಾಗಲಕಾಯಿಯ ಜ್ಯೂಸ್

ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿ ಆಗದಿದ್ದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಗೆ ನಿಮ್ಮ ದೇಹ ಸರಿಯಾಗಿ ಸಹಕಾರ ನೀಡದಿದ್ದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣದ ಅಂಶವು ಹೆಚ್ಚಾಗುತ್ತದೆ. ಇದನ್ನು ಡಯಾಬಿಟಿಸ್ ಎಂದು ಕರೆಯಲಾಗುತ್ತದೆ. ಇನ್ಸುಲಿನ್ ಎಂಬ ಹಾರ್ಮೋನು ದೇಹದಲ್ಲಿರುವ ರಕ್ತದ ಸಕ್ಕರೆ ಅಂಶವನ್ನು ನಿಯಮಿತದಲ್ಲಿ ಇಡಲು ತುಂಬಾ ಸಹಕಾರಿ. ದುರಾದೃಷ್ಟವಶಾತ್ ಈ ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರ ಇರುವುದಿಲ್ಲ.

ಆದರೆ ಒಳ್ಳೆಯ ಜೀವನಶೈಲಿ ಹಾಗೂ ಉತ್ತಮ ಆಹಾರ ಪದ್ಧತಿಗಳಿಂದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಮಿತದಲ್ಲಿ ಇಟ್ಟುಕೊಳ್ಳಬಹುದು. ಸಕ್ಕರೆ ಕಾಯಿಲೆಗೆ ಹಾಗಲಕಾಯಿ ಎಂಬ ತರಕಾರಿ ತುಂಬಾ ಸಹಕಾರಿ. ವೈದ್ಯರು ಅಥವಾ ಸಂಶೋಧಕರ ಪ್ರಕಾರ ಸಕ್ಕರೆ ಕಾಯಿಲೆ ಇರುವ ಪ್ರತಿಯೊಬ್ಬ ಮನುಷ್ಯನು ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಹಾಗಲಕಾಯಿಯ ಜ್ಯೂಸ್ ನ್ನು ಕುಡಿಯುವುದು ಒಳ್ಳೆಯದು ಎಂದು ಅಭಿಪ್ರಾಯ ಪಡುತ್ತಾರೆ. ಇದರಿಂದ ನಮ್ಮ ದೇಹದಲ್ಲಿರುವ ಸಕ್ಕರೆ ಅಂಶವು ಹಿಡಿತಕ್ಕೆ ಬಂದು, ಯಕೃತ್ತು ಶುಚಿಗೊಂಡು, ತೂಕ ಕಡಿಮೆ ಮಾಡುವಲ್ಲಿಯೂ ಸಹಾಯ ಮಾಡುತ್ತದೆ.

​ಸಕ್ಕರೆ ಕಾಯಿಲೆಯ ಔಷಧಿ
ಹಾಗಲಕಾಯಿ ಇದರ ಕಹಿ ಹಾಗೂ ಖಾರವಾದ ರುಚಿಗೆ ಹೆಸರುವಾಸಿ. ಇದರ ಹಲವಾರು ಉಪಯೋಗಗಳಿಂದ ವಿಶ್ವದ ಹಲವು ಮೂಲೆಗಳಲ್ಲಿ ಹಾಗಲಕಾಯಿಯನ್ನು ಬಳಸುತ್ತಾರೆ. ಏಶಿಯಾ ಖಂಡದಲ್ಲಿ ಹಾಗಲಕಾಯಿಯನ್ನು ಸಕ್ಕರೆ ಕಾಯಿಲೆಯ ಔಷಧಿಯಾಗಿ ತುಂಬಾ ವರ್ಷಗಳಿಂದ ಉಪಯೋಗಿಸುತ್ತಾರೆ. ಈ ತರಕಾರಿ ತನ್ನ ಘಾಡ ಹಸಿರು ಬಣ್ಣಕ್ಕೆ ಹೆಸರುವಾಸಿ. ಅಷ್ಟೇ ಅಲ್ಲದೆ ಪೌಷ್ಟಿಕಾಂಶಗಳ ಹಾಗೂ ವಿಟಮಿನ್ ಗಳ ಆಗರವಾಗಿದೆ. ಹಾಗಲಕಾಯಿಯಲ್ಲಿ ಮೆಗ್ನೀಷಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣಾಂಶ ಹಾಗೂ ನಾರಿನ ಅಂಶಗಳು ಹೇರಳವಾಗಿವೆ. ವಿಟಮಿನ್ಗಳಾದ C,B1, B2, B3, B9 ಗಳಿಂದಲೂ ಸಮೃದ್ಧವಾಗಿದೆ.

​ಹಾಗಲಕಾಯಿ ಹಾಗೂ ಸಕ್ಕರೆ ಕಾಯಿಲೆಯ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ?

ಹಾಗಲಕಾಯಿಯನ್ನು ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಒಂದು ಔಷಧಿ ಅಂತೆಯೇ ಅನುಮೋದಿಸಲಾಗಿದೆ. ಇದರಲ್ಲಿರುವ ಕಡಿಮೆ ಸಕ್ಕರೆ ಉಳ್ಳ ಅಂಶಗಳು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡುವುದು ಅಷ್ಟೇ ಅಲ್ಲದೆ ಸಕ್ಕರೆ ಕಾಯಿಲೆಯನ್ನು ಬರುವುದನ್ನು ನಿಧಾನಗೊಳಿಸುತ್ತದೆ. ಇದರಲ್ಲಿರುವ 3 ಅಂಶಗಳಾದ ಪಾಲಿಪೆಪ್ಟೈಡ್-ಪಿ, ವಿಸಿನ್, ಚರಾಟಿನ್ ಇವುಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತವೆ. ರಕ್ತದಲ್ಲಿರುವ ಸಕ್ಕರೆಯ ಅಣುಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಇನ್ಸೂಲಿನ್ ಉತ್ಪಾದನೆಯನ್ನು ಕೂಡ ಹೆಚ್ಚಿಸುತ್ತದೆ.

2011 ನೇ ಇಸವಿಯಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಹಾಗಲಕಾಯಿಯಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸುವ ಅಂಶಗಳು ತೀರಾ ಕಡಿಮೆ ಇದ್ದು, ಇದು type-2 ಡಯಾಬಿಟಿಸ್ ರೋಗಿಗಳಿಗೆ ತುಂಬಾ ಉತ್ತಮ ಎಂದು ದೃಢೀಕರಿಸಲ್ಪಟ್ಟಿದೆ. ಹಾಗೆಯೇ ಮತ್ತೊಂದು ಸಂಶೋಧನೆಯ ಪ್ರಕಾರ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಹಾಗಲಕಾಯಿ ಉತ್ತಮ ಎಂದು ಹೇಳಲಾಗಿದೆ. ಮತ್ತು 2017 ನೇ ಇಸವಿಯಲ್ಲಿ ನಡೆದ ಮತ್ತೊಂದು ಸಂಶೋಧನೆಯ ಪ್ರಕಾರ ಹಾಗಲಕಾಯಿ ಸಕ್ಕರೆ ಕಾಯಿಲೆಗೆ ಒಂದು ಸೂಪರ್ ಫುಡ್ ಎಂದು ಹೇಳಲಾಗಿದೆ. ಹಾಗಲಕಾಯಿಯ ಎರಡು ವಿಧವಾದ ಜ್ಯೂಸ್ ಗಳು ನೀವು ಮನೆಯಲ್ಲೇ ತಯಾರಿಸಬಹುದು.

​ಹಾಗಲಕಾಯಿ ಹಾಗೂ ಸೌತೆಕಾಯಿಯ ಜ್ಯೂಸ್

ಎರಡು ದೊಡ್ಡದಾದ ಹಾಗಲಕಾಯಿಗಳನ್ನು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ತೊಳೆದು ನಂತರ ಹೋಳುಗಳಾಗಿ ಮಾಡಿಕೊಳ್ಳಿ. ನಂತರ ಒಂದು ಚಮಚದ ಸಹಾಯದಿಂದ ಹಾಗಲಕಾಯಿಯ ಒಳಗಿರುವ ಬೀಜಗಳನ್ನು ಹಾಗೂ ತಿರುಳುಗಳನ್ನು ತೆಗೆದುಹಾಕಿ. ಉಳಿದಿರುವ ಹಾಗಲಕಾಯಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ತುಂಡುಗಳನ್ನು 10 ನಿಮಿಷಗಳವರೆಗೆ ಅದರಲ್ಲಿ ನೆನೆಸಿಡಿ. ಅರ್ಧ ಚಮಚ ಉಪ್ಪನ್ನು ಹಾಕಲು ಮರೆಯದಿರಿ.

ಹಾಗೆಯೇ ಮತ್ತೊಂದೆಡೆ ಒಂದು ಮಧ್ಯಮಗಾತ್ರದ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಇಟ್ಟುಕೊಳ್ಳಿ ಮತ್ತು ಒಂದು ಹಸಿರು ಸೇಬನ್ನು ಸಣ್ಣಸಣ್ಣ ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಿ. ಈಗ ನೆನೆಸಿದ ಹಾಗಲಕಾಯಿಯನ್ನು ತೆಗೆದುಕೊಂಡು ಒಂದು ಮಿಕ್ಸರಿನಲ್ಲಿ ಹಾಗಲಕಾಯಿ,ಸಿಪ್ಪೆ ತೆಗೆದ ಸೌತೆಕಾಯಿ, ಹಸಿರು ಸೇಬನ್ನು ಚೆನ್ನಾಗಿ ರುಬ್ಬಿ ರಸವನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಹೋಳು ನಿಂಬೆರಸವನ್ನು ಸೇರಿಸಿ ಸಕ್ಕರೆ ಕಾಯಿಲೆ ಇರುವವರಿಗೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಕುಡಿಸಿರಿ.

​ಹಾಗಲಕಾಯಿ ಹಾಗೂ ಅರಿಶಿನ ಜ್ಯೂಸ್

ಈ ಹಿಂದೆ ತಿಳಿಸಿರುವಂತೆಯೇ ಎರಡು ದೊಡ್ಡ ಹಾಗಲಕಾಯಿಗಳನ್ನು ತೆಗೆದು ಚೆನ್ನಾಗಿ ತೊಳೆದು ಬೀಜ ಹಾಗೂ ತಿರುಳುಗಳಿಂದ ಬೇರ್ಪಡಿಸಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು ಉಪ್ಪಿನ ನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ಮಿಕ್ಸರಿನಲ್ಲಿ ಹಾಗಲಕಾಯಿಯ ರಸವನ್ನು ತೆಗೆದುಕೊಳ್ಳಿ. ಇದಕ್ಕೆ ಕಾಲು ಚಮಚದಷ್ಟು ಅರಿಶಿನ, ಅರ್ಧ ನಿಂಬೆಹಣ್ಣಿನ ರಸ ಹಾಗೂ ಚಿಟಿಕೆಯಷ್ಟು ಹಿಮಾಲಯದ ಉಪ್ಪನ್ನು ಸೇರಿಸಿ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಇದನ್ನು ಕುಡಿಯಲು ಬಿಡಿ .ಇದರಿಂದ ಸಕ್ಕರೆ ಅಂಶ ನಿಯಮಿತದಲ್ಲಿ ಇರುವುದನ್ನು ಗಮನಿಸಿ.

ಈ ರೀತಿ ಜ್ಯೂಸ್ ಮಾಡಿ ಕುಡಿಯುವುದರಿಂದ ನಿಮಗೆ ಹಾಗಲಕಾಯಿಯ ಕಹಿ ಅಷ್ಟಾಗಿ ಅನಿಸುವುದಿಲ್ಲ. ಅದಾಗಿಯೂ ಕೆಲವೊಬ್ಬರಿಗೆ ಈ ಜ್ಯೂಸ್ ಕುಡಿಯಲೂ ಆಗುತ್ತಿಲ್ಲ ವೆಂದರೆ ಇದನ್ನು ನಿಯಮಿತವಾಗಿ ನಿಮ್ಮ ದಿನನಿತ್ಯದ ಸಾಂಬಾರ್ ಪಲ್ಯ-ಗೊಜ್ಜು ಗಳಲ್ಲಿ ಅಥವಾ ಹಾಗಲಕಾಯಿಯನ್ನು ಕರಿದು ಮಾಡುವ ಚಿಪ್ಸಗಳಲ್ಲಿ ಸೇರಿಸಿ ಅದರ ಉಪಯೋಗಗಳನ್ನು ಪಡೆಯಿರಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago