ಮನೆಯಲ್ಲಿ ದೇವರ ವಿಗ್ರಹ ಹಾಗೂ ಫೋಟೋ ಇಟ್ಟು ಪೂಜಿಸುವುದು ನಾವು ಪುರಾತನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಆಚಾರ.ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮನೆಯಲ್ಲಿ ಮಾಡುತ್ತೇವೆ.ವಾಸ್ತು ಶಾಸ್ತ್ರದ ಪ್ರಕಾರ ಕೆಲವು ದೇವರ ಫೋಟೋಗಳನ್ನು , ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಸುತ್ತದೆ.ಹಾಗಾದ್ರೆ ಯಾವ ಫೊಟೋಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಯೋಣ ಬನ್ನಿ
ವಾಸ್ತುಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಮನೆಯಲ್ಲಿ ಭೈರವ ದೇವರ ಫೋಟೋವನ್ನು ಇಡಲೇಬಾರದು.
ಭೈರವ ದೇವರು ಶಿವನ ರೂಪ ಆದರೂ ಸಹ ಭೈರವನನ್ನು ಮಾಟ ಮಂತ್ರ ಮಾಡಿ ಒಲಿಸಿಕೊಳ್ಳಬೇಕು ಹಾಗಾಗಿ ಭೈರವನ ಫೋಟೋವನ್ನು ಮನೆಯಲ್ಲಿ ಇಟ್ಟರೆ ಕಷ್ಟಗಳೇ ಹೆಚ್ಚಾಗುತ್ತವೆ.ಪರಮ ಶಿವನ ಮತ್ತೊಂದು ರೂಪ ಅಂದ್ರೆ ಅದು ನಟರಾಜ ದೇವರು.ನಟರಾಜನ ಫೋಟೋವನ್ನು ಸಹ ಮನೆಯಲ್ಲಿ ಇಡಬಾರದು ಕಾರಣ ನಟರಾಜನ ರೂಪದಲ್ಲಿರುವ ಶಿವ ತಾಂಡವ ಮಾಡುತ್ತಿರುತ್ತಾನೆ ಹಾಗಾಗಿ ನಟರಾಜನ ಫೋಟೋ ಮನೆಯಲ್ಲಿ ಇದ್ದರೆ ಆಂತರಿಕ ಕಲಹಗಳು ಜಾಸ್ತಿಯಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ಯಾವುದೇ ಕಾರಣಕ್ಕೂ ಮನೆಯಲ್ಲಿ ಶನಿದೇವರ ಫೋಟೋ ಹಾಗೂ ರಾಹು ಕೇತು ಫೋಟೋಗಳನ್ನು ಇಡಬಾರದು. ರಾಹು ಮತ್ತು ಕೇತು ಪಾಪಗ್ರಹಗಳು ಹಾಗಾಗಿ ಅವರನ್ನು ಮನೆಯಲ್ಲಿ ಇಟ್ಟರೆ ಕಷ್ಟಗಳು ಎದುರಾಗುತ್ತವೆ.ಉಗ್ರ ರೂಪದಲ್ಲಿರುವ ದುರ್ಗಾ ಮಾತೆಯ ಫೋಟೋ ಕೂಡ ಮನೆಯಲ್ಲಿ ಇಡದೆ ಇರುವುದು ಒಳ್ಳೆಯದು.ಮನೆಯಲ್ಲಿ ವಿನಾಯಕನ ಫೋಟೋಗಳನ್ನು ಎಲ್ಲರೂ ಇಡುತ್ತಾರೆ ಆದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ 3 ವಿನಾಯಕನ ಫೋಟೋ ಅಥವಾ 3 ವಿನಾಯಕನ ವಿಗ್ರಹಗಳು ಇಡಬಾರದು.
ಒಂದೇ ಮನೆಯಲ್ಲಿ ಎರಡು ಶಂಖು ಇರಬಾರದು.ಒಂದೇ ಶಂಖ ಇದ್ದರೆ ಒಳ್ಳೆಯದು.ಹೊಡೆದು ಹೋಗಿರುವ ದೇವರ ಫೋಟೋಗಳನ್ನು ಹಾಗೂ ವಿಗ್ರಹಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರಿಸಿಕೊಳ್ಳಬಾರದು. ಹಾಗೂ ಮನೆಯಲ್ಲಿ ಎತ್ತರದ ವಿಗ್ರಹಗಳನ್ನು ಇಡಬಾರದು.ಹಾಗೆ ಪೂಜೆಗೆ ಇಡುವ ಹಣ್ಣುಗಳನ್ನು ತಪ್ಪದೇ ತೊಳೆದು ನಂತರ ದೇವರ ಮುಂದೆ ಇಡಬೇಕು. ಈ ಆಧುನಿಕ ಕಾಲದಲ್ಲಿ ಇವೆಲ್ಲ ಯಾಕೆ ನಂಬಬೇಕು ಎಂದು ಕೆಲವರು ಭಾವಿಸುತ್ತಾರೆ ಆದರೆ ಒಂದು ವಿಧಾನ,ಆಚಾರ ಹಾಗೂ ಶಾಸ್ತ್ರ ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ ಅಂದ್ರೆ ಅದರಲ್ಲಿ ಖಂಡಿತ ಸತ್ಯ ಮತ್ತು ಸತ್ವ ಇದೆ ಅಂತಲೇ ಅರ್ಥ ಅಲ್ಲವೇ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…