Categories: Latest

ಸತ್ತ ನಂತರ ನಿಮ್ಮ ಆತ್ಮ ಹೇಗೆ ಯಮಲೋಕಕ್ಕೆ ಹೋಗುತ್ತದೆ!

ಹುಟ್ಟು ಎಂದ ಮೇಲೆ ಸಾವು ಇರಲೇಬೇಕು. ಸಾವಿನ ನಂತರ ಆತ್ಮವು ದೇಹವನ್ನು ತೊರೆದಾಗ ಅದು ಸ್ವಲ್ಪ ಸಮಯದವರೆಗೆ ಸುಪ್ತಾವಸ್ಥೆಯಲ್ಲಿರುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆತ್ಮವು ಪ್ರಜ್ಞೆಯನ್ನು ಮರಳಿ ಪಡೆದ ನಂತರ ತನ್ನ ದೇಹವನ್ನು ಕಂಡು ದುಃಖಪಡುತ್ತದೆ. ದುಃಖದಲ್ಲಿರುವ ತನ್ನ ಕುಟುಂಬವನ್ನು ಕಂಡು ಅದು ಕೂಡ ಮರುಕವನ್ನು ವ್ಯಕ್ತಪಡಿಸುತ್ತದೆ. ತನ್ನ ಕುಟುಂಬದೊಂದಿಗೆ ಮಾತನಾಡಲು ಪ್ರಯತ್ನಿಸುತ್ತದೆ ಮತ್ತು ತನ್ನ ದೇಹವನ್ನು ಮರಳಿ ಸೇರಲು ಇಚ್ಛಿಸುತ್ತದೆ.

ಸಾವಿನ ನಂತರ ಆತ್ಮ ಹೇಗಿರುತ್ತದೆ:–ಆತ್ಮವು ಪ್ರಜ್ಞೆಯನ್ನು ಪಡೆದಾಕ್ಷಣ ಯಮದೂತರು ಬಂದು ಆತ್ಮವನ್ನು ತಮ್ಮೊಂದಿಗೆ ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಯಮಲೋಕದಲ್ಲಿ ಚಿತ್ರಗುಪ್ತರು ಮತ್ತು ಅವನ ಸಹಚರರು ಆತ್ಮವು ದೇಹದಲ್ಲಿದ್ದಾಗ ಮಾಡಿದ ಎಲ್ಲಾ ಕಾರ್ಯಗಳನ್ನು ಲೆಕ್ಕ ಮಾಡುತ್ತದೆ. ಯಾರಿಗೂ ಕೂಡ ನಾವು ಸತ್ತ ಮೇಲೆ ನಮ್ಮ ಆತ್ಮ ಏನಾಗುತ್ತದೆ ಎನ್ನುವ ಅರಿವಿರುವುದಿಲ್ಲ. ನಮ್ಮೆಲ್ಲರ ಪ್ರಕಾರ ಮರಣದ ನಂತರ ನಾವು ಇನ್ನೊಂದು ಜನ್ಮವನ್ನು ಪಡೆಯುತ್ತೇವೆಂಬ ನಂಬಿಕೆಯಿದೆ. ನಿಜವಾಗಿಯೂ ನಾವು ಮರಣದ ನಂತರ ಏನಾಗುತ್ತೇವೆ..ಆತ್ಮಕ್ಕೂ ಯಮಲೋಕಕ್ಕೂ ಏನು ಸಂಬಂಧ.

ಆತ್ಮ ಹಿದಿರುಗುತ್ತದೆ.–ಸತ್ತ ವ್ಯಕ್ತಿಯ ಆತ್ಮವು 12 ದಿನಗಳವರೆಗೆ ತನ್ನ ಕುಟುಂಬದಲ್ಲೇ ಉಳಿಯುತ್ತದೆ. ನಂತರ ಕುಟುಂಬವು ನೀಡಿದ ಪಿಂಡದಾನವನ್ನು, ನೀರನ್ನು ಕುಡಿದು ತನ್ನ ಅಸ್ವಾಭಾವಿಕ ದೇಹವನ್ನು ಬೆರಳಿನ ಆಕಾರದಲ್ಲಿ ಮಾಡುತ್ತದೆ. ಜೀವಂತವಾಗಿದ್ದಾಗ ಮಾಡಿದ ಎಲ್ಲಾ ಕರ್ಮವನ್ನು ಪಾವತಿಸಬೇಕಾಗುತ್ತದೆ. ಈ ಅನಾಚಾರದ ದೇಹವನ್ನು ಯಮ ದೂತರು 12ನೇ ದಿನದಂದು ಕಟ್ಟಿ ಯಮ ಮಾರ್ಗಕ್ಕೆ ಕರೆದೊಯ್ಯಲಾಗುತ್ತದೆ. ಯಮ ಮಾರ್ಗಕ್ಕೆ ಪ್ರಯಾಣವು ಅತ್ಯಂತ ಕಷ್ಟವೆಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಯಮಮಾರ್ಗಕ್ಕೆ ಹೋಗುವ ದಾರಿಯಲ್ಲಿ ಆತ್ಮವು ದೇಹದಲ್ಲಿದ್ದಾಗ ಮಾಡಿದ ಕರ್ಮಗಳಿಗೆ ಪ್ರತಿಫಲವನ್ನು ಅನುಭವಿಸುತ್ತದೆ. 12 ತಿಂಗಳಲ್ಲಿ ಆತ್ಮವು 16 ನಗರಗಳನ್ನು ಮತ್ತು ಅನೇಕ ನರಕಗಳನ್ನು ದಾಟಿ ಯಮಲೋಕವನ್ನು ತಲುಪುತ್ತದೆ.

ಆತ್ಮಕ್ಕೆ 12 ದಿನಗಳಿರುತ್ತದೆ–ಸಾವಿನ ನಂತರ ಪ್ರತಿಯೊಬ್ಬ ವ್ಯಕ್ತಿಯು 12 ದಿನಗಳ ಕಾಲ ಪ್ರೇತಾತ್ಮವಾಗಿ ಅಲೆದಾಡಬೇಕಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಮರಣ ಹೊಂದಿದ ನಂತರ ವ್ಯಕ್ತಿಯ ಆತ್ಮಕ್ಕೆ ಅಭೌತಿಕ ದೇಹವನ್ನು ಪಡೆಯಲು 12 ದಿನಗಳು ಬೇಕಾಗುತ್ತದೆ. ಅಭೌತಿಕ ದೇಹವು ಸ್ವರ್ಗದ ಪ್ರಭಾವದಿಂದಾಗಿ ಮತ್ತು ಸದ್ಗುಣದಿಂದಾಗಿ ಪಾಪಕ್ಕೆ ಅನುಗುಣವಾಗಿ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ. ಆತ್ಮವು ಕರ್ಮದ ಫಲವನ್ನು ಅನುಭವಿಸಿದ ನಂತರ ಮತ್ತೆ ಹೊಸ ದೇಹವನ್ನು ಸೇರುತ್ತದೆ. ಸ್ವರ್ಗವನ್ನು ಸೇರಿದ ಆತ್ಮವು ಸದ್ಗುಣಶೀಲನಾಗಿ, ಶ್ರೀಮಂತ ಮತ್ತು ಸಂತೋಷದ ಕುಟುಂಬದಲ್ಲಿ ಜನಿಸುತ್ತಾರೆ.

ಸಾವಿನ ನಂತರ ಆತ್ಮದ ಪ್ರಯಾಣ–ಮರಣಾನಂತರದ ಜೀವನವನ್ನು ವಿವರಿಸುವ ಗರುಡ ಪುರಾಣವು, ಧರ್ಮನಿಷ್ಠವಾದ ಆತ್ಮ ಮಾತ್ರ ವಿಷ್ಣುವಿನ ಲೋಕಕ್ಕೆ ವಿಷ್ಣು ದೂತರೊಂದಿಗೆ ಹೋಗುತ್ತದೆಯೇ ಹೊರತು ನರಕಕ್ಕೆ ಹೋಗಬೇಕೆಂದೇನಿಲ್ಲ. ಸಾವಿನ ನಂತರ ಒಂದು ವೇಳೆ ಆತ್ಮವನ್ನು ಯಮಲೋಕಕ್ಕೆ ಕರೆದುಕೊಂಡ ಹೋದಾಗ ಯಮನ ಸಂದೇಶವಾಹಕರು ಅಭೌತಿಕ ದೇಹವನ್ನು ಅಥವಾ ಅತೃಪ್ತ ಆತ್ಮವನ್ನು ಒಂದೇ ದಿನದಲ್ಲಿ 1600 ಕಿಲೋಮೀಟರ್‌ ದೂರ ಓಡಿಸುತ್ತಾರೆ. ಆತ್ಮವು ದೇಹವ್ನನು ತೊರೆದ ದಿನ ಮಾತ್ರ ಅದಕ್ಕೆ ವಿಶ್ರಾಂತಿಯನ್ನು ನೀಡಲಾಗುತ್ತದೆ.

ಮರಣದ ನಂತರ ಶ್ರಾದ್ದ. ತರ್ಪಣ ನೀಡಲು ಕಾರಣ–ವ್ಯಕ್ತಿಯ ಮರಣದ ನಂತರ ಸಾವಿನ ದಿನಾಂಕದಿಂದ ಒಂದು ವರ್ಷದವರೆಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕೆಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಅವಧಿಯಲ್ಲಿ ಬ್ರಾಹ್ಮಣರಿಗೆ, ಪ್ರಾಣಿ, ಪಕ್ಷಿಗಳಿಗೆ ದಾನ ಮಾಡಿದ ಆಹಾರವು ಸತ್ತ ವ್ಯಕ್ತಿಯ ಆತ್ಮವನ್ನು ಮತ್ತಷ್ಟು ಬಲಪಡಿಸುತ್ತದೆ. ಯಾವ ಕುಟುಂಬದಲ್ಲಿ ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ದಾನ, ಶ್ರಾದ್ಧ, ತರ್ಪಣವನ್ನು ಮಾಡಲಾಗುವುದಿಲ್ಲವೋ ಆ ಆತ್ಮವು ಯಮಮಾರ್ಗದಲ್ಲಿ ನೋವನ್ನು, ಬಳಲುವಿಕೆಯನ್ನು ಅನುಭವಿಸುತ್ತದೆ. ಆತ್ಮವು ಅತೃಪ್ತ ಆತ್ಮವಾಗಿರುತ್ತದೆ.

ಮರಣದ ನಂತರ ನಮ್ಮ ಆತ್ಮವು ಹೇಗಿರುತ್ತದೆ ಎಂದು ತಿಳಿದುಕೊಂಡೀರಲ್ಲವೇ..ನಾವು ಅಸ್ಥಿತ್ವದಲ್ಲಿದ್ದಾಗ ಮಾಡಿದ ಪಾಪ, ಕರ್ಮಗಳಿಂದಾಗಿ ಮರಣಾ ನಂತರ ನಮ್ಮ ಆತ್ಮವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಜೀವನದಲ್ಲಿ ಒಳಿತು ಮಾಡುವುದು ಉತ್ತಮ. ಅಷ್ಟಲ್ಲದೇ ನಮ್ಮ ಸಿ. ಅಶ್ವಥ್‌ ಅವರು ಒಳಿತು ಮಾಡು ಮನುಸ..ನೀ ಇರೋದು ಮೂರು ದಿವಸ ಎಂದು ಹೇಳಿದ್ದಾರಲ್ಲವೇ.. ನಾವು ಮಾಡಿದ ಪಾಪ, ಕರ್ಮಗಳೇ ಕೊನೆವರೆಗೂ ನಮ್ಮೊಂದಿಗಿರುವುದು……..

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago