Health

ದಿನಾ ಇಡ್ಲಿ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ?

ಇಡ್ಲಿ ಬಹಳ ಜನರಿಗೆ ಫೇವರೆಟ್ ತಿಂಡಿ. ಕೆಲವರಂತೂ ಪ್ರತಿದಿನ ಕೆಲಸಕ್ಕೆ ಹೋಗುವ ಮುಂಚೆ ಇಡ್ಲಿಯ ದರ್ಶನ ಪಡೆಯದೇ ಹೋಗುವುದಿಲ್ಲ. ಹಾಗಾಗಿ ಎಲ್ಲರಿಗೂ ಒಂದೇ ರೀತಿಯ ಇಡ್ಲಿ ತಿಂದು ತಿಂದು ಬೋರ್ ಆಗಿರಬಹುದು.

ಅಂತಹವರಿಗೆ ಈ ಲೇಖನದಲ್ಲಿ ನೀಡಿರುವ ಹಾಗೆ ಇಡ್ಲಿ ತಯಾರಿ ಪ್ರಕ್ರಿಯೆಯಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡು ಕೆಲವೊಂದು ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಇಡ್ಲಿ ತಯಾರು ಮಾಡಿ ಸವಿದರೆ ಎಷ್ಟು ರುಚಿಕರ ಎಂಬುದನ್ನು ತೋರಿಸಿಕೊಡುವ ಉದ್ದೇಶ ಈ ಲೇಖನದಲ್ಲಿ ಅಡಗಿದೆ.

ಇಡ್ಲಿಯನ್ನು ತಯಾರು ಮಾಡಲು ನಾವು ಸುಮಾರು ಎಂಟರಿಂದ ಹತ್ತು ಗಂಟೆಗಳ ಕಾಲ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆ ಹಾಕಿ ನಂತರ ಅದನ್ನು ರುಬ್ಬಿ ಮತ್ತೆ ಇಡೀ ರಾತ್ರಿ ಅದನ್ನು ಫರ್ಮೆಂಟೇಶನ್ ಪ್ರಕ್ರಿಯೆ ಆಗಲು ಹಾಗೆ ಬಿಟ್ಟು ಬೆಳಗ್ಗೆ ಎದ್ದು ಸ್ವಲ್ಪ ಸೋಡಾ ಬೆರೆಸಿ ಇಡ್ಲಿ ಅಥವಾ ದೋಸೆ ತಯಾರು ಮಾಡಿಕೊಂಡು ಸೇವನೆ ಮಾಡುತ್ತೇವೆ.ಆದರೆ ರುಬ್ಬುವಾಗ ಈ ಕೆಳಗೆ ತಿಳಿಸಿರುವ ಹಾಗೆ ಕೆಲವೊಂದು ವಿಶೇಷವಾದ ಆಹಾರ ಪದಾರ್ಥಗಳನ್ನು ಬಳಕೆ ಮಾಡಿ ಇಡ್ಲಿ ತಯಾರಿ ಮಾಡಬಹುದು. ಈ ಲೇಖನದಲ್ಲಿ ಇಂತಹ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

​ಪಾಲಕ್ ಸೊಪ್ಪು ಮಿಶ್ರಿತ ಇಡ್ಲಿ–ಪಾಲಕ್ ಸೊಪ್ಪು ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ಶಕ್ತಿಯುತವಾದ ಹಸಿರೆಲೆ ತರಕಾರಿ ಎಂದು ಸಾಬೀತಾಗಿದೆ. ಇದರಲ್ಲಿ ಕಬ್ಬಿಣದ ಅಂಶದ ಪ್ರಮಾಣ ಯಥೇಚ್ಛವಾಗಿ ಕಂಡುಬರುತ್ತದೆ. ನೀವು ತಯಾರುಮಾಡುವ ಇಡ್ಲಿ ಹಿಟ್ಟಿಗೆ ಪಾಲಕ್ ಸೊಪ್ಪಿನ ಪೇಸ್ಟ್ ಬೆರೆಸಬಹುದು.

ಇದರಿಂದ ನಿಮ್ಮ ಇಡ್ಲಿ ಕೇವಲ ರುಚಿಕರ ಮಾತ್ರ ಆಗಿರದೆ ಆರೋಗ್ಯಕರ ಕೂಡ ಆಗಿರುತ್ತದೆ. ಕೇವಲ ಸ್ವಲ್ಪ ಪ್ರಮಾಣದಲ್ಲಿ ನಿಮ್ಮ ಇಡ್ಲಿ ಹಿಟ್ಟಿಗೆ ಪಾಲಕ್ ಸೊಪ್ಪಿನ ಪೇಸ್ಟ್ ಮಿಶ್ರಣ ಮಾಡಿ ರುಬ್ಬಿದರೆ ಸಾಕು.ಆದರೆ ಈ ನಂತರದಲ್ಲಿ ನಿಮ್ಮ ಇಡ್ಲಿ ಹಿಟ್ಟಿನ ಬಣ್ಣ ಹಸಿರು ಬಣ್ಣಕ್ಕೆ ಬದಲಾಗಬಹುದು. ಹೀಗಿದ್ದಾಗ ಮಕ್ಕಳಿಗೂ ಸಹ ಇಡ್ಲಿ ಆಕರ್ಷಕವಾಗಿ ಕಾಣುವುದು.

​ಮೆಂತ್ಯ ಸೊಪ್ಪು ಮಿಶ್ರಿತ ಇಡ್ಲಿ–ಮೆಂತ್ಯ ಕಾಳುಗಳು ಅಥವಾ ಮೆಂತ್ಯ ಸೊಪ್ಪು ಎರಡು ಸಹ ನಮಗೆ ಆರೋಗ್ಯಕರ ಎಂದು ಹೇಳಬಹುದು. ಏಕೆಂದರೆ ಬೇಸಿಗೆ ಕಾಲದಲ್ಲಿ ಮೆಂತ್ಯ ನಮ್ಮ ದೇಹಕ್ಕೆ ತಂಪಿನ ಪ್ರಭಾವವನ್ನು ಉಂಟು ಮಾಡುತ್ತದೆ.ಬಿಸಿಲಿನ ಬೇಗೆಗೆ ಬಳಲಿರುವ ನಾವುಗಳು ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೆನೆಹಾಕಿದ ಮೆಂತ್ಯೆ ಕಾಳುಗಳ ನೀರನ್ನು ಕುಡಿಯುವುದರಿಂದಲೂ ಸಹ ದೇಹವನ್ನು ತಂಪು ಮಾಡಿಕೊಳ್ಳಬಹುದು.

ಹೀಗಿದ್ದಾಗ ಇಡ್ಲಿ ಹಿಟ್ಟಿನ ತಯಾರಿಯಲ್ಲಿ ಮೆಂತ್ಯ ಕಾಳುಗಳನ್ನು ಸಹ ಬಳಕೆ ಮಾಡುತ್ತಾರೆ. ತಯಾರಾಗುವ ಇಡ್ಲಿಯ ರುಚಿ ಒಳ್ಳೆಯ ಪ್ರಮಾಣದಲ್ಲಿ ಬದಲಾಗುತ್ತದೆ ಎನ್ನುವ ನಂಬಿಕೆ ಇಡ್ಲಿ ತಯಾರಿಕೆಯ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಇರುತ್ತದೆ.ಇದರ ಜೊತೆಗೆ ಆರೋಗ್ಯಕರವಾದ ಆಹಾರವಾಗಿ ತಯಾರಾಗುವ ಇಡ್ಲಿಗಳು ಬದಲಾಗುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ಮೆಂತ್ಯೆ ಕಾಳುಗಳ ಬದಲಾಗಿ ಮೆಂತ್ಯ ಸೊಪ್ಪನ್ನು ಸಹ ಇಡ್ಲಿ ಹಿಟ್ಟಿನ ತಯಾರಿಯಲ್ಲಿ ಬಳಸಬಹುದು.

​ರಾಗಿ ಇಡ್ಲಿ–ದಕ್ಷಿಣ ಭಾರತದ ಪ್ರಸಿದ್ಧವಾದ ಅಡುಗೆಗಳಲ್ಲಿ ರಾಗಿ ಮುದ್ದೆ ಸಹ ಒಂದು. ರಾಗಿಯಿಂದ ಕೇವಲ ಮುದ್ದೆ ಮಾತ್ರವಲ್ಲದೆ, ರೊಟ್ಟಿ, ಇಡ್ಲಿ, ದೋಸೆ ಇತ್ಯಾದಿಗಳನ್ನು ಸಹ ತಯಾರು ಮಾಡುತ್ತಾರೆ. ಇಡ್ಲಿ ತಯಾರು ಮಾಡಲು ಹಿಟ್ಟು ರೆಡಿ ಮಾಡಿಕೊಳ್ಳುವಾಗ ಸ್ವಲ್ಪ ರಾಗಿಹಿಟ್ಟನ್ನು ಸಹ ಸೇರಿಸುವುದರಿಂದ ಇಡ್ಲಿಯ ಬಣ್ಣ ಮಾತ್ರ ಬದಲಾಗುವುದಿಲ್ಲ.

ಬದಲಿಗೆ ಸಾಕಷ್ಟು ಆರೋಗ್ಯಕರವಾದ ಆಹಾರ ಎಂಬ ಹೆಸರನ್ನು ರಾಗಿ ಇಡ್ಲಿ ಪಡೆದುಕೊಳ್ಳುತ್ತದೆ. ಚಿಕ್ಕ ಮಕ್ಕಳಿಗೂ ಸಹ ಮತ್ತು ವಯಸ್ಸಾದವರಿಗೂ ಸಹ ರಾಗಿ ಇಡ್ಲಿಗಳನ್ನು ಸೇವನೆ ಮಾಡಲು ಕೊಡಬಹುದು.

ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ರಾಗಿಯಿಂದ ನಮ್ಮದಾಗುತ್ತದೆ ಎಂದು ನಿರೀಕ್ಷೆ ಮಾಡುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ವಿಶೇಷವಾಗಿ ಬೇಸಿಗೆ ಸಮಯದಲ್ಲಿ ನೀವು ಸಹ ಮನೆಯಲ್ಲಿ ರಾಗಿ ಇಡ್ಲಿ ರಾಗಿ ದೋಸೆ ಇತ್ಯಾದಿಗಳನ್ನು ಆಗಾಗ ಮಾಡಿಕೊಂಡು ತಿನ್ನುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ದೇಹ ಹೆಚ್ಚು ಶಕ್ತಿಯಿಂದ ಕೂಡಿರುತ್ತದೆ ಮತ್ತು ಸದೃಢವಾಗಿ ಇರುವುದರ ಜೊತೆಗೆ ತಂಪಾಗಿರುತ್ತದೆ ಕೂಡ.

​ಇಂಗು ಮಿಶ್ರಿತ ಇಡ್ಲಿ–ಹೊಟ್ಟೆಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳನ್ನು ಇಂಗು ದೂರವಿಡುತ್ತದೆ. ಇಡ್ಲಿ ಹಿಟ್ಟಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಂಗು ಬಳಕೆ ಮಾಡುವುದರಿಂದ ತಯಾರಾಗುವ ಇಡ್ಲಿಯ ಸ್ವಾದ ಬದಲಾಗುತ್ತದೆ.ಜೊತೆಗೆ ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡುತ್ತಿದ್ದೇವೆ ಎನ್ನುವ ತೃಪ್ತಿ ಕೂಡ ನಿಮಗೆ ಇರುತ್ತದೆ.ಅಜೀರ್ಣತೆಯ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುವಲ್ಲಿ ಇಂಗು ಒಳ್ಳೆಯ ಪಾತ್ರ ವಹಿಸುತ್ತದೆ.ಕೇವಲ ಇಡ್ಲಿ ತಯಾರಿಯಲ್ಲಿ ಮಾತ್ರವಲ್ಲದೆ ನಾವು ತಯಾರುಮಾಡುವ ಇನ್ನು ಬಹುತೇಕ ಆಹಾರ ಪದಾರ್ಥಗಳಲ್ಲಿ ಇಂಗು ಬಳಕೆಮಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago