Kannada News

ಬೆಳ್ಳುಳ್ಳಿಯನ್ನು ಮೊಳಕೆ ಬಂದ ಮೇಲೆ ತಿನ್ನಿ ಅದ್ಬುತವಾದ ಲಾಭವನ್ನು ಪಡೆಯಿರಿ!

ಮೊಳಕೆ ಕಟ್ಟಿದ ಯಾವುದೇ ಪದಾರ್ಥಗಳಿಂದ ದೂರ ಉಳಿಯುತ್ತೇವೆ ಎನ್ನುವವರು ನಮ್ಮ ಮಧ್ಯೆ ಹಲವು ಮಂದಿ ಇದ್ದಾರೆ. ಅದೇನೋ ಗೊತ್ತಿಲ್ಲ ಅವರ ಪ್ರಕಾರ ಮೊಳಕೆ ಕಟ್ಟಿದ ಯಾವುದೇ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಕೆಟ್ಟದ್ದು ಉಂಟು ಮಾಡುತ್ತವೆ ಎಂದಿರುತ್ತದೆ. ಮೊಳಕೆಯಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳನ್ನು ಆಹಾರ ಪದಾರ್ಥಗಳು ಬಿಡುಗಡೆ ಮಾಡಿರುತ್ತವೆ ಎಂಬುದು ಅವರ ನಂಬಿಕೆ.

ಇದರ ಕಾರಣದಿಂದ ಮೊಳಕೆ ರಹಿತ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಹಲವು ಕಡೆ ನಾವು ಬೆಳ್ಳುಳ್ಳಿಯನ್ನು ಮೊಳಕೆ ಬರಿಸಿ ಆಮೇಲೆ ಸೇವನೆ ಮಾಡುವ ಜನರನ್ನು ನೋಡಿರುತ್ತೇವೆ. ಏಕೆಂದರೆ ಬೆಳ್ಳುಳ್ಳಿಯಲ್ಲಿ ಔಷಧೀಯ ಅಂಶಗಳ ಪ್ರಭಾವ ತುಂಬಾ ಹೆಚ್ಚಾಗಿದೆ.

ಇದರ ಜೊತೆಗೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ದೂರ ಮಾಡಿ ಹೃದಯದ ಆರೋಗ್ಯವನ್ನು ಉತ್ತಮಪಡಿಸುವ ಗುಣಲಕ್ಷಣಗಳು ಬೆಳ್ಳುಳ್ಳಿಯಲ್ಲಿ ಹೆಚ್ಚು ಸಿಗುತ್ತವೆ. ಮೊಳಕೆ ಬರಿಸಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ, ಚರ್ಮದ ಸೋಂಕುಗಳು ನಿವಾರಣೆಯಾಗುವುದು, ದೇಹದಲ್ಲಿ ಕ್ಯಾನ್ಸರ್‌ಕಾರಕ ಜೀವಕೋಶಗಳು ಇಲ್ಲವಾಗುವುದು, ಮೂಗು ಎದೆ ಹಾಗೂ ಗಂಟಲು ಭಾಗದಲ್ಲಿ ಕಟ್ಟಿಕೊಂಡಿರುವ ಕಫ ಕರಗುವುದು ಇತ್ಯಾದಿ ಹಲವಾರು ಊಹೆಗೂ ಮೀರಿದ ಆರೋಗ್ಯ ಪ್ರಯೋಜನಗಳು ಬೆಳ್ಳುಳ್ಳಿಯಲ್ಲಿ ಸಿಗಲಿವೆ.ಅಧ್ಯಯನಗಳು ಹೇಳುವ ಹಾಗೆ, ಮೊಳಕೆ ಕಟ್ಟಿದ ಬೆಳ್ಳುಳ್ಳಿಯನ್ನು ದಿನನಿತ್ಯ ಸೇವನೆ ಮಾಡುವುದರಿಂದ ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

​ಕ್ಯಾನ್ಸರ್ ಕಾರಕ ಜೀವಕೋಶಗಳ ವಿರುದ್ಧ ಹೋರಾಡುತ್ತದೆ–ಮೊಳಕೆ ಕಟ್ಟಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಫೈಟುಕೆಮಿಕಲ್ ಅಂಶಗಳು ಲಭ್ಯವಾಗಿ ದೇಹದಲ್ಲಿ ಈಗಾಗಲೇ ಬೆಳವಣಿಗೆ ಯಾಗಿರುವ ಕ್ಯಾನ್ಸರ್ ಕಾರಕ ಜೀವಕೋಶಗಳು ಮತ್ತಷ್ಟು ಪ್ರಮಾಣದಲ್ಲಿ ತಮ್ಮ ಸಂತತಿಯನ್ನು ಹೆಚ್ಚು ಮಾಡಿಕೊಳ್ಳಲು ಬಿಡುವುದಿಲ್ಲ.ಇಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಕೂಡ ಹೆಚ್ಚಾಗಿರುವುದರಿಂದ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳು ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರದಂತೆ ನೋಡಿಕೊಳ್ಳುತ್ತವೆ.

​ನಿಮ್ಮ ಹೃದಯವನ್ನು ರಕ್ಷಣೆ ಮಾಡುತ್ತವೆ—ನಿಮ್ಮ ಆಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿ ಬಳಕೆ ಹೆಚ್ಚು ಮಾಡುವುದರಿಂದ ಅಥವಾ ಮೊಳಕೆ ಬಂದಿರುವ ಹಸಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ, ರಕ್ತನಾಳಗಳಲ್ಲಿ ರಕ್ತಸಂಚಾರವನ್ನು ತಡೆಹಿಡಿಯುವ ಯಾವುದೇ ಅಂಶಗಳು ಇಲ್ಲದಂತೆ ನೋಡಿಕೊಂಡು ಹೃದಯದ ಕಾರ್ಯಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸುತ್ತವೆ.ಇದರಿಂದ ಹೃದಯಕ್ಕೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಯಾವುದೇ ಕ್ಷಣದಲ್ಲಿ ಎದುರಾಗುವುದಿಲ್ಲ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಂದ ಸಹ ದೂರವುಳಿಯಬಹುದು.

​ಪಾರ್ಶ್ವವಾಯು ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು–ಬೆಳ್ಳುಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವ ವ್ಯಕ್ತಿಗಳಿಗೆ ನೈಟ್ರೇಟ್ ಅಂಶಗಳನ್ನು ಒದಗಿಸಿ ರಕ್ತನಾಳಗಳನ್ನು ಹಿಗ್ಗಿಸಿ ಸರಾಗವಾದ ರಕ್ತಸಂಚಾರ ಉಂಟುಮಾಡುವ ಸ್ವಭಾವವಿದೆ.ಇದರಿಂದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಅಥವಾ ಮಿದುಳಿನ ಭಾಗಕ್ಕೆ ಕಡಿಮೆ ಪ್ರಮಾಣದಲ್ಲಿ ರಕ್ತ ಸಂಚಾರ ಉಂಟಾಗುವ ಸಾಧ್ಯತೆ ಇರುವುದಿಲ್ಲ.

ಮೊಳಕೆ ಬಂದಿರುವ ಬೆಳ್ಳುಳ್ಳಿಗಳನ್ನು ಆಗಾಗ ಸೇವನೆ ಮಾಡುವುದರಿಂದ ಅವುಗಳಲ್ಲಿ ಕಂಡುಬರುವ ನೈಸರ್ಗಿಕ ರಾಸಾಯನಿಕ ಅಂಶಗಳು ದೇಹದಲ್ಲಿ ರಕ್ತನಾಳಗಳ ಮೇಲೆ ಯಾವುದೇ ಒತ್ತಡ ಉಂಟಾಗದಂತೆ ತಡೆದು ಪಾರ್ಶ್ವವಾಯು ಸಮಸ್ಯೆಯಿಂದ ರಕ್ಷಣೆ ಮಾಡುತ್ತವೆ.

​ಚರ್ಮದ ಭಾಗದಲ್ಲಿ ಸುಕ್ಕುಗಳು ಹಾಗೂ ವಯಸ್ಸಾಗುವಿಕೆ ಪ್ರಕ್ರಿಯೆ ದೂರಮಾಡುತ್ತವೆ–ಕೇವಲ ಆಂತರಿಕವಾಗಿ ಮಾತ್ರವಲ್ಲದೆ, ಬೆಳ್ಳುಳ್ಳಿ ಮೊಳಕೆ ಬರಿಸಿ ಸೇವನೆ ಮಾಡುವುದರಿಂದ ಅವುಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೆಚ್ಚಾಗಿ ಸಿಕ್ಕಿದಂತಾಗಿ, ಫ್ರೀ ರಾಡಿಕಲ್ ಅಂಶಗಳ ವಿರುದ್ಧ ರಕ್ಷಣೆ ಸಿಗುತ್ತದೆ.ಇದರಿಂದ ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ದೂರವಾಗುತ್ತದೆ ಮತ್ತು ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಮಾಯವಾಗುತ್ತವೆ. ದೇಹದ ಒಳಭಾಗದಲ್ಲಿ ಕೂಡ ಅಂಗಾಂಗಗಳ ರಕ್ಷಣೆ ಮೊಳಕೆ ಬಂದ ಬೆಳ್ಳುಳ್ಳಿ ಗಳಿಂದ ಉಂಟಾಗುತ್ತದೆ ಎಂದು ಹೇಳಬಹುದು.

​ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ–ಒಂದು ವೇಳೆ ನೀವು ಹೆಚ್ಚು ಕೆಮ್ಮು ಅಥವಾ ಕಫ ಸಮಸ್ಯೆಯಿಂದ ಆಗಾಗ ಬಳಲುವ ಸಾಧ್ಯತೆ ಇದ್ದರೆ, ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದರ್ಥ.ಇಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಸಣ್ಣಪುಟ್ಟ ಶೀತದ ಸಮಸ್ಯೆ ಎದುರಾದರೂ ಕೂಡ ಗಂಭೀರವಾದ ಆರೋಗ್ಯದ ಸೋಂಕುಗಳನ್ನು ಹೊಂದುವ ಸಾಧ್ಯತೆ ಇರುತ್ತದೆ.ಹೀಗಾಗಿ ಮೊಳಕೆ ಕಟ್ಟಿದ ಬೆಳ್ಳುಳ್ಳಿಗಳನ್ನು ಆಹಾರ ಪದ್ಧತಿಯಲ್ಲಿ ಬಳಕೆಮಾಡಿ ಸೇವನೆ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಸೋಂಕುಗಳಿಂದ ದೂರವಾಗಲು ಅನುಕೂಲವಾಗುತ್ತದೆ.

​ಬೆಳ್ಳುಳ್ಳಿಯಲ್ಲಿ ಮೊಳಕೆ ಬರಿಸುವುದು ಹೇಗೆ?–ಸಾಮಾನ್ಯವಾಗಿ ಬೆಳ್ಳುಳ್ಳಿ ತಾನಾಗಿಯೇ ಮೊಳಕೆಯೊಡೆಯುತ್ತದೆ. ಆದರೆ ಅದನ್ನು ತೆರೆದ ಜಾಗದಲ್ಲಿ ಇಡಬೇಕು ಅಷ್ಟೇ. ಒಂದು ವೇಳೆ ನೀವು ಮನೆಯಲ್ಲಿ ಬೆಳ್ಳುಳ್ಳಿಗಳನ್ನು ಮೊಳಕೆ ಬರಿಸಲು ಮುಂದಾದರೆ ಈ ಕೆಳಗಿನ ತಂತ್ರಗಳನ್ನು ಅನುಸರಿಸಿ.ಮೊದಲಿಗೆ ಒಂದು ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ಸುಲಿಯದ ಹಾಗೆ ತೆಗೆದುಕೊಂಡು, ಅದರ ಎರಡೂ ಬದಿಗಳಲ್ಲಿ ಟೂತ್ ಪಿಕ್ ನಿಂದ ಚುಚ್ಚಿ, ಟೂತ್ ಪಿಕ್ ಗಳು ಅಲ್ಲೇ ಇರುವಂತೆ ನೋಡಿಕೊಳ್ಳಿ.

ಈಗ ಒಂದು ಲೋಟದಲ್ಲಿ ನೀರು ತುಂಬಿಕೊಂಡು ನಿಮ್ಮ ಬಳಿ ಇರುವ ಬೆಳ್ಳುಳ್ಳಿ ಅದರಲ್ಲಿ ಅರ್ಧ ಮುಳುಗುವಂತೆ ಲೋಟದ ಮೇಲೆ ಇರಿಸಿ. ಚೆನ್ನಾಗಿ ಬಿಸಿಲು ಬರುವ ಜಾಗದಲ್ಲಿ ನಾಲ್ಕೈದು ದಿನಗಳ ಕಾಲ ಇದನ್ನು ಇಟ್ಟರೆ ಬೆಳ್ಳುಳ್ಳಿ ಮೊಳಕೆ ಬರಲು ಪ್ರಾರಂಭವಾಗುತ್ತದೆ. ಆನಂತರ ನೀವು ಇದನ್ನು ತಿನ್ನಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago