ಮನೆಯಲ್ಲಿ ಯಾವ ರೀತಿ ಊಟ ಮಾಡಿದರೆ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ!

ಊಟ ಮಾಡುವಾಗ ಹಲವು ಪದ್ಧತಿ, ನಿಯಮಗಳನ್ನು ಅನುಸರಿಸಬೇಕು ಅಂತಾ ಹಿಂದೂ ಧರ್ಮದಲ್ಲಿದೆ. ಆ ನಿಯಮಮವನ್ನು ನಾವು ಅನುಸರಿಸುವುದರಿಂದ, ನಮ್ಮ ಆರೋಗ್ಯ ಉತ್ತವಾಗಿರುತ್ತದೆ. ಮತ್ತು ನಮಗೆ ಆರ್ಥಿಕ ಸಮಸ್ಯೆಯೂ ಬರುವುದಿಲ್ಲ. ಆದ್ರೆ ಆ ನಿಯಮವನ್ನು ಪಾಲಿಸದಿದ್ದಲ್ಲಿ, ಆರೋಗ್ಯ, ಅದೃಷ್ಟ ಎರಡೂ ಕೈ ತಪ್ಪುತ್ತದೆ. ಹಾಗಾಗಿ ನಾವಿಂದು ಊಟಕ್ಕೆ ಕೂತಾಗ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..

ಊಟ ಮಾಡುವಾಗ ಪಾಲಿಸಬೇಕಾದ ಮೊದಲ ನಿಯಮವೆಂದರೆ, ಕೈ ಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು. ಈಗಲೂ ಹಲವಾರು ಜನ ಈ ನಿಯಮ ಪಾಲಿಸುತ್ತಿರುವುದು ಉತ್ತಮ ವಿಚಾರ. ಇದು ಬರೀ ನಿಯಮವಲ್ಲ. ಇದರಿಂದ ನಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವುದಿಲ್ಲ. ನಾವು ಮುಟ್ಟುವ ಹಲವು ವಸ್ತುಗಳ ಮೇಲೆ ಕ್ರಿಮಿ ಕೀಟಗಳು ಕುಳಿತುಕೊಂಡಿರುತ್ತದೆ. ಅದೇ ಕೈಯಿಂದ ನಾವು ಉಂಡರೆ, ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಊಟಕ್ಕೆ ಕುಳಿತುಕೊಳ್ಳುವ ಮೊದಲು ಸ್ವಚ್ಛವಾಗಿ ಕೈ ಕಾಲು ತೊಳೆದುಕೊಳ್ಳಿ.

ಎರಡನೇಯದಾಗಿ ನೆಲದ ಮೇಲೆ ಚಟ್ಟೆ-ಮುಟ್ಟೆ ಹಾಕಿ ಕುಳಿತು ಊಟ ಮಾಡಿದರೆ ನಮ್ಮ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ. ಮತ್ತು ಇದು ಊಟ ಮಾಡುವ ಸರಿಯಾದ ನಿಯಮ. ಆದ್ರೆ ಈಗಿನ ಕಾಲದಲ್ಲಿ ಕೆಲವರು ಡೈನಿಂಗ್ ಟೇಬಲ್ ಬಳಸಿ ಊಟ ಮಾಡುತ್ತಾರೆ. ಕುಳಿತುಕೊಳ್ಳಲು ತೊಂದರೆ ಇದ್ದವರು ಹೀಗೆ ಮಾಡಿದರೆ, ತಪ್ಪಿಲ್ಲ. ಆದರೆ ನೀವು ಆರೋಗ್ಯವಂತರಾಗಿದ್ದರೂ, ಡೈನಿಂಗ್ ಟೇಬಲ್ ಬಳಸುವುದು ಅಷ್ಟು ಸೂಕ್ತವಲ್ಲ.

ಲಕ್ಷ್ಮಿ ದೇವಿಯ ಅಕ್ಕ ದರಿದ್ರ ಲಕ್ಷ್ಮಿ ಆಗಿದ್ದೇಕೆ–ಮೂರನೇಯದಾಗಿ ಮಾತನಾಡದೇ ಮೌನವಾಗಿ ಊಟ ಮಾಡಬೇಕು. ಕೆಲವರು ಊಟ ಮಾಡುವಾಗ, ಹರಟೆ ಹೊಡೆಯುತ್ತಾರೆ. ಅಥವಾ ಮೊಬೈಲ್, ಟಿವಿ ನೋಡುತ್ತ ಊಟ ಮಾಡುತ್ತಾರೆ. ಆದ್ರೆ ಹೀಗೆ ಮಾಡುವುದು ನಮ್ಮ ಆರೋಗ್ಯಕ್ಕೂ ಉತ್ತಮವಲ್ಲ ಎಂದು ಹೇಳಲಾಗಿದೆ. ಊಟ ಮಾಡುವಾಗ ಮಾತನಾಡದೇ, ಊಟ ಮಾಡಬೇಕೆಂಬ ನಿಯಮವಿದೆ. ಹಾಗಾಗಿ ಕೆಲ ಬ್ರಾಹ್ಮಣರಲ್ಲಿ ಉಪನಯನವಾದ ಯುವಕರು, ಊಟಕ್ಕೆ ಕುಳಿತಾಗ ಮಾತನಾಡಬಾರದು ಎಂಬ ನಿಯಮವಿದೆ.

ನಾಲ್ಕನೇಯದಾಗಿ ನಾವು ನಮಗೆ ಸಿಗುವ ಆಹಾರವನ್ನು ಸಿಟ್ಟು ಮಾಡದೇ, ತಿನ್ನಬೇಕು. ಕೆಲವರಿಗೆ ಕೆಲ ಪದಾರ್ಥಗಳು ಇಷ್ಟವಾಗುವುದಿಲ್ಲ. ಹಾಗಾಗಿ ನನಗಿದು ಬೇಡವೆಂದು ಊಟವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಾರೆ. ಹಾಗೆ ಮಾಡುವುದು ತಪ್ಪು. ಇದು ನೀವು ಅನ್ನಪೂರ್ಣೆಗೆ ಮಾಡುವ ಅವಮಾನ. ನಿಮಗೆ ಸಿಗುವ ಊಟಕ್ಕೆ ಗೌರವ ಕೊಟ್ಟು, ತಿನ್ನಿ. ಇನ್ನು ಬೆಡ್‌ ಮೇಲೆ, ಸೋಫಾದ ಮೇಲೆ ಕುಳಿತು ಊಟಮಾಡಬೇಡಿ. ಮಲಗಿದ ರೀತಿ ಕುಳಿತು ಊಟ ಮಾಡುವುದು ಉತ್ತಮವಲ್ಲ. ನೇರ ಭಂಗಿಯಲ್ಲಿ ಕುಳಿತು ಊಟ ಮಾಡು.

ಐದನೇಯ ಮತ್ತು ಕೊನೆಯ ನಿಯಮವೆಂದರೆ, ಬೆಳಿಗ್ಗೆ ರಾಜನಂತೆ, ಮಧ್ಯಾಹ್ನ ಸಾಮಾನ್ಯನಂತೆ ಮತ್ತು ರಾತ್ರಿ ಬಡವನಂತೆ ಉಣ್ಣಬೇಕಂತೆ. ಇದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಬೆಳಿಗ್ಗಿನ ತಿಂಡಿ ಅಂದ್ರೆ, ಕಟ್ಟುವ ಮನೆಗೆ ಫೌಂಡೇಶನ್ ಇದ್ದಂಗೆ. ನಿಮ್ಮ ಮನೆ ಅಂದ್ರೆ ನಿಮ್ಮ ದೇಹ ಗಟ್ಟಿಮುಟ್ಟಾಗಿರಬೇಕು ಅಂದ್ರೆ ಬೆಳಿಗ್ಗೆ ಆರೋಗ್ಯಕರ ತಿಂಡಿಯನ್ನು ಸರಿಯಾಗಿ ಸೇವಿಸಬೇಕು. ಮತ್ತು ಮಧ್ಯಾಹ್ನದ ಊಟವನ್ನು ಸರಿಯಾದ ಸಮಯಕ್ಕೆ ತಿನ್ನಬೇಕು. ರಾತ್ರಿ ಕೊಂಚ ಕಡಿಮೆ ಊಟವನ್ನೇ ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago