Astrology

ಸುಂದರಕಾಂಡ ಎಂದರೇನು? ಇದನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು!

ಜ್ಯೋತಿಷ್ಯ ಮತ್ತು ಪುರಾಣಗಳಲ್ಲಿ ಶನಿದೇವನು ಹನುಮಂತನಿಗೆ ಹೆದರುತ್ತಾನೆಂದು ಹೇಳಲಾಗಿದೆ. ಶನಿದೇವನಿಂದಾಗುವ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಲಿರುವ ಸರಳ ಮಾರ್ಗವೆಂದರೆ ಅದುವೇ ಹನುಮಂತನನ್ನು ಆರಾಧಿಸುವುದು. ಶನಿದೋಷದಿಂದ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಶನಿವಾರದಂದು ತಪ್ಪದೇ ಸುಂದರಕಾಂಡವನ್ನು ಪಠಿಸಿ. ಇದನ್ನು ಪಠಿಸುವುದರಿಂದ ಹನುಮಂತನು ಸಂತೋಷಗೊಳ್ಳುತ್ತಾನೆ ಹಾಗೂ ಶನಿದೋಷ ಅಥವಾ ಶನಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಸುಂದರಕಾಂಡ ಎಂದರೇನು?ಸುಂದರಕಾಂಡವೆಂಬುದೂ ರಾಮಾಯಣವೆಂಬ ಮಹಾಕಾವ್ಯದಲ್ಲೇ ಅತ್ಯಂತ ಸುಂದರವಾದ, ಮನಮೋಹಕವಾದ ಕಂಡವಾಗಿದೆ. ಈ ಕಂಡದಲ್ಲಿನ ಒಂದೊಂದು ಕಾವ್ಯವೂ ಸೀತಾ ಆಂಜನೇಯರ ಸಂಭಾಷಣೆ, ಆಂಜನೇಯ ಮತ್ತು ರಾಮನ ಸಂಭಾಷಣೆ, ಹನುಮನು ಸೀತೆಯನ್ನು ಹುಡುಕಿದ ರೀತಿ, ಲಂಕೆಯನ್ನು ಸುಟ್ಟ ಸಂದರ್ಭ ಸೇರಿದಂತೆ ಆಂಜನೇಯನಿಗೆ ಸಂಬಂಧಿಸಿದ ಎಲ್ಲಾ ಸನ್ನಿವೇಶಗಳನ್ನು ಇಲ್ಲಿ ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ಅಷ್ಟು ಮಾತ್ರವಲ್ಲ, ಹನುಮನ ಮತ್ತೊಂದು ಹೆಸರು ಸುಂದರ ಎಂದಾಗಿರುವುದರಿಂದಲೇ ಈ ಕಂಡವನ್ನು ಸುಂದುರಕಾಂಡವೆಂದು ಕರೆಯಲಾಗುತ್ತದೆ. ಈ ಕಾವ್ಯವನ್ನು ಶನಿವಾರದ ದಿನ ಪಠಿಸುವುದರಿಂದಾಗುವ ಪ್ರಯೋಜನಗಳೇನು ನೋಡೋಣ.

ಪರಿಸ್ಥಿತಿಯಲ್ಲಿದ್ದ ಆಸೆಗಳು ಈಡೇರುತ್ತವೆ.ಹಿಂದೂ ಧರ್ಮೀಯರ ನಂಬಿಕೆಯ ಪ್ರಕಾರ, ಸುಂದರಕಾಂಡವನ್ನು ಪಠಿಸುವವರ ಆಸೆಗಳು ಶೀಘ್ರದಲ್ಲೇ ಈಡೇರುತ್ತದೆ. ಗೋಸ್ವಾಮಿ ತುಳಸಿದಾಸರು ಬರೆದ ರಾಮಚರಿತ ಮಾನಸದಲ್ಲಿನ 7 ಅಧ್ಯಾಯಗಳಲ್ಲಿ ಸುಂದರಕಾಂಡ ಐದನೇಯದು. ರಾಮಚರಿತ ಮಾನಸದ ಎಲ್ಲಾ ಅಧ್ಯಾಯಗಳು ದೇವರ ಭಕ್ತಿಯನ್ನು ಒಳಗೊಂಡಿದ್ದರೆ ಸುಂದರಕಾಂಡವು ದೋಷ ಪರಿಹಾರ, ಹನುಮನ ಶಕ್ತಿಯನ್ನು ಒಳಗೊಂಡಿದೆ.

ಸುಂದರಕಾಂಡದ ಪ್ರಾಮುಖ್ಯತೆ…ರಾಮಚರಿತ ಮಾನಸದಲ್ಲಿ ದೇವರ ಸದ್ಗುಣಗಳನ್ನು ಸಂಪೂರ್ಣವಾಗಿ ಚಿತ್ರಿಸಲಾಗಿದೆ. ಮತ್ತು ದೇವರ ಮಹಿಮೆಯನ್ನು ಬಣ್ಣಸಲಾಗಿದೆ. ಆದರೆ ಮತ್ತೊಂದೆಡೆ ರಾಮಚರಿತ ಮಾನಸದ ಸುಂದರಕಾಂಡದಲ್ಲಿನ ಕಥೆಯು ವಿಭಿನ್ನವಾಗಿದೆ ಹಾಗೂ ವಿಶಿಷ್ಟವಾಗಿದೆ. ರಾಮಚರಿತ ಮಾನಸವು ರಾಮನ ಮಹತ್ವವನ್ನು ಬಣ್ಣಿಸಿದರೆ, ಸುಂದರಕಾಂಡವು ಸಂಪೂರ್ಣ ಹನುಮನ ಕಥೆಯನ್ನು, ಹನುಮನ ಗುಣಗಳನ್ನು ಹಾಗೂ ಆತನ ವಿಜಯವನ್ನು ಬಣ್ಣಿಸುತ್ತದೆ.

ಸುಂದರಕಾಂಡ ಪಠಿಸುವುದರ ಪ್ರಯೋಜನ…ಸುಂದರಕಾಂಡವನ್ನು ಪಠಿಸುವ ಭಕ್ತರಿಗೆ ಹನುಮಂತನು ಶಕ್ತಿಯನ್ನು ನೀಡುತ್ತಾನೆ. ಆ ವ್ಯಕ್ತಿಯ ಸುತ್ತಲಿರುವ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ. ಓರ್ವ ವ್ಯಕ್ತಿಯ ಆತ್ಮವಿಶ್ವಾಸ ಕಡಿಮೆಯಾದಾಗ ಅಥವಾ ಆತನ ಜೀವನದಲ್ಲಿ ಅಂದುಕೊಂಡ ಯಾವುದೇ ಕೆಲಸಗಳು ನೆರವೇರದಿದ್ದಾಗ ಸುಂದರಕಾಂಡವನ್ನು ಪಠಿಸಬೇಕು. ಇದರಿಂದ ಸ್ಥಗಿತಗೊಂಡ ಎಲ್ಲಾ ಕೆಲಸಗಳು ತಾನಾಗಿಯೇ ಪೂರ್ಣಗೊಳ್ಳುವುದೆಂಬ ನಂಬಿಕೆಯಿದೆ.

ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತದೆ…ಮನೋವಿಜ್ಞಾನಿಗಳು ಕೂಡ ಸುಂದರಕಾಂಡವನ್ನು ವಿಶೇಷವೆಂದು ಪರಿಗಣಿಸುತ್ತಾರೆ. ಸುಂದರಕಾಂಡ ಪಠ್ಯದ ಮಹತ್ವವನ್ನು ಶಾಸ್ತ್ರೀಯ ನಂಬಿಕೆಗಳು ಮಾತ್ರವಲ್ಲ, ವಿಜ್ಞಾನವು ಕೂಡ ವಿವರಿಸುತ್ತದೆ. ಸುಂದರಕಾಂಡವನ್ನು ಪಠಿಸಿದರೆ ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿ ಹೆಚ್ಚಾಗುತ್ತದೆ ಎಂದು ಅನೇಕ ಮನಶಾಸ್ತ್ರಜ್ಞರು ಹೇಳುತ್ತಾರೆ. ಮನಶಾಸ್ತ್ರಜ್ಞರ ಪ್ರಕಾರ, ಯಾವುದೇ ಓರ್ವ ವ್ಯಕ್ತಿಯು ದೊಡ್ಡ ಪರೀಕ್ಷೆಯಲ್ಲಿ ಯಶಸ್ಸನ್ನು ಹೊಂದಬೇಕಾದರೆ ಅಂತವರು ಪರೀಕ್ಷೆಗಿಂತ ಮೊದಲು ಸುಂದರಕಾಂಡವನ್ನು ಓದಬೇಕೆಂದು ಹೇಳುತ್ತಾರೆ.

ಶನಿ ದೋಷ ನಿವಾರಣೆ…ಶನಿದೇವನು ಹನುಮಂತನ ಪರಮ ಭಕ್ತ ಹಾಗೂ ಹನುಮಂತನೆಂದರೆ ಶನಿದೇವರಿಗೆ ಭಯವಿದೆ. ಶನಿದೋಷ ಸಮಸ್ಯೆಯಿಂದ ಬಳಲುತ್ತಿರುವವರು ಅಥವಾ ಶನಿಯ ದುಷ್ಪರಿಣಾಮಗಳನ್ನು ತಮ್ಮ ಜೀವನದಲ್ಲಿ ಅನುಭವಿಸುತ್ತಿರುವವರು ತಪ್ಪದೇ ಸುಂದರಕಾಂಡವನ್ನು ಓದಬೇಕು. ಇದರಿಂದ ಶನಿಯ ದುಷ್ಪರಿಣಾಮವು ಕಡಿಮೆಯಾಗಿ ಆತನ ಆಶೀರ್ವಾದ ಲಭ್ಯವಾಗುತ್ತದೆ.

ಯಶಸ್ಸಿನ ಮೂಲಗಳು…ಸಾಧ್ಯವಾದರೆ ವಿದ್ಯಾರ್ಥಿಗಳು ಹೆಚ್ಚಾಗಿ ಸುಂದರಕಾಂಡವನ್ನು ಓದಬೇಕು. ಸುಂದರಕಾಂಡವು ವಿದ್ಯಾರ್ಥಿಗಳಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಮತ್ತು ಯಶಸ್ಸನ್ನು ನೀಡುತ್ತದೆ. ಒಂದು ವೇಳೆ ಸುಂದರಕಾಂಡವನ್ನು ಒಂದೇ ಬಾರಿ ಓದಲು ಸಾಧ್ಯವಾಗದಿದ್ದರೆ, ಸ್ವಲ್ಪ ಸ್ವಲ್ಪವೇ ಓದಬಹುದು.
ಯಾರಿಗೆ ಅಗತ್ಯವಿದೆಯೋ ಅವರೇ ಸುಂದರಕಾಂಡವನ್ನು ಓದಬೇಕು

ಮನೆಯಲ್ಲಿ ರಾಮಾಯಣ ಪುಸ್ತಕವಿದ್ದರೆ ಸುಂದರಕಾಂಡವನ್ನು ಮನೆಯ ಸದಸ್ಯರು ಯಾರು ಬೇಕಾದರೂ ಓದಬಹುದು. ಆದರೆ ಒಬ್ಬರು ಅರ್ಧ, ಇನ್ನೊಬ್ಬರು ಅರ್ಧ ಓದುವಂತಿಲ್ಲ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸುಂದರಕಾಂಡವನ್ನು ಓದುವುದರಿಂದ ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುತ್ತದೆ. ಇದನ್ನು ಓದಿದರೆ ಸರ್ವರೋಗವು ನಿವಾರಣೆಯಾಗುವುದು ಹಾಗೂ ಬಡತನವು ಅಂತ್ಯಗೊಳ್ಳುವುದು.
ಗ್ರಹಗಳ ದುಷ್ಟ ಪರಿಣಾಮವನ್ನು ದೂರಾಗಿಸುತ್ತದೆ

ಜ್ಯೋತಿಷ್ಯ ದೃಷ್ಟಿಕೋನದಿಂದ ಸುಂದರಕಾಂಡ ಓದುವುದರ ಮಹತ್ವವನ್ನು ಹೇಳುವುದಾದರೆ, ಇದನ್ನು ಓದುವುದರಿಂದ ಮನೆಯ ಎಲ್ಲಾ ಸದಸ್ಯರ ಗ್ರಹ ದೋಷವು ನಿವಾರಣೆಯಾಗುತ್ತದೆ. ಹಾಗಾಗಿ ಮನೆಯಲ್ಲಿ ಯಾರಾದರೊಬ್ಬರು ಸುಂದರಕಾಂಡವನ್ನು ಪಠಿಸಿದರೂ ಸಾಕಾಗುತ್ತದೆ. ಗ್ರಹಗಳಿಂದಾಗುವ ದುಷ್ಪರಿಣಾಮವನ್ನು ತೆಗೆದುಹಾಕಲು ಸುಂದರಕಾಂಡವನ್ನು ಓದಬೇಕು.

ಸಾಲದಿಂದ ಮುಕ್ತಿ ನೀಡುತ್ತದೆ…ಸುಂದರಕಾಂಡವನ್ನು ನಿಯಮಿತವಾಗಿ ಓದುವುದರಿಂದ ಸಾಲ ಭಾದೆಯು ದೂರಾಗುವುದು. ನೀವು ಜೀವನದಲ್ಲಿ ಸಾಕಷ್ಟು ಸಾಲವನ್ನು ಮಾಡಿದ್ದು, ಅದನ್ನು ತೀರಿಸಲು ಶ್ರಮಿಸುತ್ತಿದ್ದರೆ ತಡಮಾಡದೆ ಸುಂದರಕಾಂಡವನ್ನು ಓದಿರಿ. ಸುಂದರಕಾಂಡ ಓದಿದರೆ ಸಾಲದಿಂದ ಮುಕ್ತಿ ಹೊಂದಬಹುದು.

ಭಯವನ್ನು ಹೊಡೆದೋಡಿಸುತ್ತದೆ..ಒಂದು ವೇಳೆ ನಿಮಗೆ ಯಾವುದೋ ಭಯ ಕಾಡುತ್ತಿದ್ದರೆ ಅಥವಾ ರಾತ್ರಿ ಮಲಗಿದಾಗೆಲ್ಲಾ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಸುಂದರಕಾಂಡವನ್ನು ಓದಿರಿ. ಇನ್ನು ಹನುಮಾನ್‌ ಚಾಲೀಸವನ್ನು ಪಠಿಸಿದರೂ ಕೂಡ ಭಯದಿಂದ ಪರಿಹಾರ ಪಡೆಯುವಿರಿ.

ಗ್ರಹದೋಷ ನಿವಾರಣೆ ಆಗುತ್ತದೆ…ಸುಂದರಕಾಂಡವನ್ನು ಓದಿದರೆ ಮನೆಯ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ. ಮನೆಯವರ ದುಃಖವು ಕಳೆಯುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ನೆಲೆಸುತ್ತದೆ. ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸದಂತೆ ತಡೆಯುತ್ತದೆ. ಮನೆಯಲ್ಲಿನ ಎಲ್ಲಾ ಸದಸ್ಯರುಗಳಲ್ಲಿ ಯಾರಾದರು ಒಬ್ಬರು ಓದಿದರು ಕೂಡ ಸಾಕಾಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago