Astrology

ನಿಮ್ಮ ಜನ್ಮ ದಿನಾಂಕ 1, 10, 19 28 ರಲ್ಲಿ ಆಗಿದ್ದಲ್ಲಿ ಈ ಮಾಹಿತಿ ನೋಡಿ!

Kannada Astrology :ಸಂಖ್ಯಾಶಾಸ್ತ್ರದಲ್ಲಿ ಸೂರ್ಯನನ್ನು ಸಂಖ್ಯೆ 1 ಕ್ಕೆ ಹೋಲಿಸುತ್ತೇವೆ ಅಥವಾ ಆತನನ್ನು ಗ್ರಹಗಳ ರಾಜ ಎಂದೂ ಕೂಡ ಕರೆಯುತ್ತೇವೆ. ಜನ್ಮಸಂಖ್ಯೆ ಒಂದರಲ್ಲಿ ಜನಿಸಿದವರು ಎಂದಿಗೂ ಇತರರ ಮುಂದೆ ತಲೆ ಬಗ್ಗಿಸಿ ನಿಲ್ಲಲು ಇಷ್ಟಪಡುವುದಿಲ್ಲ. ಯಾವಾಗಲೂ ತಾವೇ ರಾಜರಂತಿರಬೇಕೆನ್ನುವ ಆಸೆ ಅವರಲ್ಲಿರುತ್ತದೆ. ಸಂಕ್ಯೆ 1 ರಲ್ಲಿ ಜನಿಸಿದವರಿಗೆ ಆದೇಶ ನೀಡಿಯೇ ಅಭ್ಯಾಸವಾಗಿರುತ್ತದೆ.

ಸಂಖ್ಯೆ 1, 10, 19 ಮತ್ತು 28 ನ್ನು ಸಂಖ್ಯಾಶಾಸ್ತ್ರದಲ್ಲಿ ಒಂದೇ ಎಂದು ಪರಿಗಣಿಸಲಾಗುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಸಂಖ್ಯೆ 1 ರಲ್ಲಿ ಜನಿಸಿದವರಿಗೆ ಯಾವುದೇ ಕೆಲಸ ವಹಿಸಿದರೂ ಅದನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವ ಅಭ್ಯಾಸವಿರುತ್ತದೆ. ಇವರಿಗೆ ತಾವೇ ಸ್ವತಃ ಕೆಲಸ ಮಾಡುವುದಕ್ಕಿಂತ ಇತರರ ಬಳಿ ಕೆಲಸ ಮಾಡಿಸುವುದರಲ್ಲಿ ಹೆಚ್ಚಿನ ಸಂತೋಷ, ನೆಮ್ಮದಿ ಇರುತ್ತದೆ.

ಜನ್ಮಸಂಖ್ಯೆ 1 ಆಗಿದ್ದರೆ ಅಂತಹ ವ್ಯಕ್ತಿಗಳು ಎಲ್ಲಾ ದುಬಾರಿ ವಸ್ತುಗಳನ್ನು ಬಳಸುತ್ತಾರೆ, ಬ್ರ್ಯಾಂಡೆಡ್‌ ವಸ್ತುಗಳನ್ನು ಹೆಚ್ಚಿ ಇಷ್ಟಪಡುತ್ತಾರೆ. ಶ್ರೀಮಂತ ಅಥವಾ ಅನುಕೂಲಸ್ತ ಮನೆಗಳಲ್ಲಿ ಇವರು ಜನಿಸಿರುತ್ತಾರೆ. ಒಂದು ವೇಳೆ ಇವರು ಜನಿಸುವ ಮುನ್ನ ಆ ಮನೆಯಲ್ಲಿ ಯಾವುದೇ ಅನುಕೂಲತೆ ಇಲ್ಲದಿದ್ದರೂ ಕೂಡ ಈ ಸಂಖ್ಯೆಯಲ್ಲಿ ಜನಿಸಿದ ನಂತರ ಆ ಮನೆಯಲ್ಲಿ ಲಕ್ಷ್ಮಿ ಆಗಮನವಾಗುತ್ತದೆ. ಒಂದೊಂದಾಗಿ ಎಲ್ಲಾ ಸೌಲಭ್ಯಗಳು ದೊರೆಯಲು ಆರಂಭವಾಗುತ್ತದೆ. ಆದ್ದರಿಂದ ಜನ್ಮಸಂಖ್ಯೆ 1 ಆಗಿದ್ದವರು ಮನೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡಿರುತ್ತಾರೆ. 1 ನೇ ತಾರೀಕಿನಲ್ಲಿ ಜನಿಸಿದವರಿಗೆ ಜಂಭ ಕೂಡ ಅಷ್ಟೇ ಇರುತ್ತದೆ.

ಜನ್ಮ ಸಂಖ್ಯೆ 10 ಆಗಿದ್ದರೆ ಅವರ ಗುಣಲಕ್ಷಣ ಹೀಗಿರುತ್ತದೆ:ಸಂಖ್ಯೆ 10 ಎಂಬುದು ಸಂಖ್ಯೆ 1 ನ್ನು ಸೂಚಿಸಿದರೂ ಕೂಡ 10 ನೇ ತಾರೀಕಿನಲ್ಲಿ ಜನಿಸಿದವರ ಗುಣಲಕ್ಷಣಗಳು ಮತ್ತು 1 ನೇ ತಾರೀಕಿನಲ್ಲಿ ಜನಿಸಿದವರ ಗುಣಲಕ್ಷಣ, ಸ್ವಭಾವಗಳು ಒಂದೇ ರೀತಿ ಇರುವುದಿಲ್ಲ. ಬದಲಾಗಿ ವಿಭಿನ್ನವಾಗಿರುತ್ತದೆ. ಸಂಖ್ಯೆ 10 ರಲ್ಲಿ 1 ಮುಂದೆ 0 ಬಂದಿರುವುದರಿಂದ ಅವರ ಸ್ವಭಾವದಲ್ಲಿ ವ್ಯತ್ಯಾಸವಿರುತ್ತದೆ. ಸೊನ್ನೆ ಯಾವಾಗಲೂ ವೃತ್ತಾಕಾರದಲ್ಲಿ ತಿರುಗುತ್ತದೆ. ಅದೇ ರೀತಿ ಈ ಸಂಖ್ಯೆಯಲ್ಲಿ ಜನಿಸಿದವರ ಜೀವನ ಕೂಡ ವೃತ್ತಾಕಾರವಾಗಿರುತ್ತದೆ. ಒಮ್ಮೆ ಸಂತೋಷದಿಂದಿದ್ದರೆ ಮತ್ತೊಮ್ಮೆ ದುಃಖ ಹೀಗೆ ಹೀಗೆ ಮನೋಭಾವ ಬದಲಾಗುತ್ತಿರುತ್ತದೆ. 1 ನೇ ತಾರೀಕಿನಲ್ಲಿ ಜನಿಸಿದವರಿಗೆ ಸಿಗುವಂತಹ ಪರಿಪೂರ್ಣ ಯೋಗ 10 ನೇ ತಾರೀಕಿನಲ್ಲಿ ಜನಿಸಿದವರಿಗೆ ಸಿಗುವುದಿಲ್ಲ. ಅವರ ಜೀವನದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯವಾಗಿರುತ್ತದೆ.

ಜನ್ಮ ಸಂಖ್ಯೆ 19 ಆಗಿದ್ದರೆ ಅವರ ಗುಣಲಕ್ಷಣ ಹೀಗಿರುತ್ತದೆ:ಸಂಖ್ಯೆ 19 ನ್ನು ಸಂಖ್ಯಾಶಾಸ್ತ್ರದಲ್ಲಿ ಅಧ್ಬುತ ಸಂಖ್ಯೆ ಎಂದೂ ಕೂಡ ಕರೆಯಲಾಗುತ್ತದೆ. ಈ ಎರಡು ಸಂಖ್ಯೆಯಲ್ಲಿ ಸಂಖ್ಯೆ 1 ರಾಜನನ್ನು ಸೂಚಿಸಿದರೆ, ಸಂಖ್ಯೆ 9 ಸೇನಾಧಿಪತಿಯನ್ನು ಸೂಚಿಸುತ್ತದೆ. ಯಾವಾಗ ರಾಜ ಮತ್ತು ಸೇನಾಧಿಪತಿ ಒಟ್ಟಾಗುತ್ತಾರೋ ಆಗ ಯಾವುದೇ ರಾಜ್ಯವನ್ನು ಬೇಕಾದರೂ ಸುಲಭವಾಗಿ ಗೆಲ್ಲಬಹುದು. ಅದೇ ರೀತಿ ಈ ಸಂಖ್ಯೆಯಲ್ಲಿ ಅಂದರೆ 19 ನೇ ತಾರೀಕಿನಿಂದು ಜನಿಸಿದವರಲ್ಲಿ ಅಂತಹ ಅದ್ಭುತ ಶಕ್ತಿಯಿರುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರು ಐಎಎಸ್‌, ಐಪಿಎಸ್‌, ಆಡಳಿತಾಧಿಕಾರಿಗಳಾಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಜನ್ಮ ಸಂಖ್ಯೆ 28 ಆಗಿದ್ದರೆ ಅವರ ಗುಣಲಕ್ಷಣ ಹೀಗಿರುತ್ತದೆ:ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆ 2 ನ್ನು ಚಂದ್ರಮಾ ಮತ್ತು ಸಂಖ್ಯೆ 8 ನ್ನು ಶನಿ ಎಂದು ಪರಿಗಣಿಸಲಾಗುತ್ತದೆ. ಚಂದ್ರಮಾ ಮತ್ತು ಶನಿ ಸೇರಿದಾಗ ಸೂರ್ಯನ ಸಂಖ್ಯೆ ಬರುತ್ತದೆ. ಈ ಸಂಖ್ಯೆಗಳ ಮಿಲನವು ನಕಾರಾತ್ಮಕತೆಯನ್ನು ಸೂಚಿಸುತ್ತದೆ. ನಕಾರಾತ್ಮಕ ಎಂದರೆ ಇವರು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬಹುದು, ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆಗಳಿರಬಹುದು ಅಥವಾ ಸಾಂಸಾರಿಕ ಜೀವನದಲ್ಲೂ ಸಮಸ್ಯೆಗಳಿರಬಹುದು. ಆದರೆ ಇವರಲ್ಲೂ ಕೂಡ ನಾಯಕತ್ವದ ಗುಣಗಳಿರುತ್ತದೆ.

Kannada Astrology ಸಂಖ್ಯೆ 1 ಕ್ಕೆ ಸಂಖ್ಯೆ 8 ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಇವರು ಯಾವುದೇ ಕೆಲಸ ಮಾಡುವುದಾದರೂ ಈ ಸಂಖ್ಯೆಯನ್ನು ನಿರ್ಲಕ್ಷಿಸಿ ಮಾಡಬೇಕು. ಸಂಖ್ಯೆ 8 ರಲ್ಲಿ ಯಾವುದೇ ಕೆಲಸವನ್ನು ಮಾಡಬಾರದು. ಜನ್ಮಸಂಖ್ಯೆ ಒಂದಾಗಿದ್ದರೆ ಅವರು ಜನ್ಮಸಂಖ್ಯೆ 8 ರ ಹುಡುಗಿಯನ್ನೋ ಅಥವಾ ಹುಡುಗನನ್ನೋ ವಿವಾಹವಾಗಬಾರದು. 3, 9, 5, 6 ಮತ್ತು 7 ಈ ಸಂಖ್ಯೆಗಳು ಜನ್ಮಸಂಖ್ಯೆ 1 ಆಗಿದ್ದವರ ಅದೃಷ್ಟದ ಸಂಖ್ಯೆಯಾಗಿರುತ್ತದೆ. ಕಿತ್ತಳೆ ಬಣ್ಣ, ಕೆಂಪು, ಬಿಳಿ ಸೇರಿದಂತೆ ಎಲ್ಲಾ ಬಣ್ಣವನ್ನು ಇವರು ಧರಿಸಬಹುದು. ಆದರೆ, ಇವು ಕಡು ಬಣ್ಣವನ್ನು ಹೊರತುಪಡಿಸಿ, ಯಾವುದೇ ತಿಳಿ ಬಣ್ಣವನ್ನು ಬಳಸಬಹುದು. ಜನ್ಮಸಂಖ್ಯೆ 1 ಆಗಿದ್ದರೆ ಅವರು ಪಿ ಅಕ್ಷರದಿಂದ ಹೆಸರನ್ನು ಇಟ್ಟುಕೊಳ್ಳಬೇಕು. ಇದರಿಂದ ಶುಭ ಫಲಗಳು ಲಭ್ಯವಾಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago